Select Your Language

Notifications

webdunia
webdunia
webdunia
webdunia

ರಾಯ್‌ಪುರದಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಮೊದಲ ಕವಿ ವಿನೋದ್ ಕುಮಾರ್ ಇನ್ನಿಲ್ಲ

Writer Vinod Kumar Shukla
Photo Credit X
ಬೆಂಗಳೂರು: ಖ್ಯಾತ ಹಿಂದಿ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿನೋದ್ ಕುಮಾರ್ ಶುಕ್ಲಾ(88) ಇಂದು ರಾಯ್‌ಪುರದಲ್ಲಿ ಮಂಗಳವಾರ ನಿಧನರಾದರು.

ಹೆಸರಾಂತ ಹಿಂದಿ ಬರಹಗಾರ, ಕವಿ ಮತ್ತು ಕಾದಂಬರಿಕಾರ ಶುಕ್ಲಾ ಅವರು ಛತ್ತೀಸ್‌ಗಢದಿಂದ ಈ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ.

ಶುಕ್ಲಾ ಅವರು ಸಂಜೆ 4:58 ಕ್ಕೆ  ನಿಧನರಾದರೆಂದು ಏಮ್ಸ್ ರಾಯ್‌ಪುರದ ಪಿಆರ್‌ಒ ಲಕ್ಷ್ಮೀಕಾಂತ್ ಚೌಧರಿ ಅವರು ದೃಢಪಡಿಸಿದರು.

ಸಾವಿಗೆ ಬಹು ಅಂಗಗಳ ಸೋಂಕು ಮತ್ತು ಅಂಗ ವೈಫಲ್ಯ ಕಾರಣ ಎಂದು ಹೇಳಿದರು. ಡಿಸೆಂಬರ್ 2 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಈ ವರ್ಷದ ಆರಂಭದಲ್ಲಿ, ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಶುಕ್ಲಾ ಅವರಿಗೆ 59 ನೇ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯು ವಿವಿಧ ಭಾರತೀಯ ಭಾಷೆಗಳಲ್ಲಿ ಸಾಹಿತ್ಯದಲ್ಲಿ ಸಾಧನೆ ಮಾಡಿದ ಲೇಖಕರಿಗೆ ನೀಡುವ ಅತ್ಯುನ್ನತ ಸಾಹಿತ್ಯ ಗೌರವವಾಗಿದೆ.

ಹೆಸರಾಂತ ಹಿಂದಿ ಬರಹಗಾರ, ಕವಿ ಮತ್ತು ಕಾದಂಬರಿಕಾರ ಶುಕ್ಲಾ ಅವರು ಛತ್ತೀಸ್‌ಗಢದಿಂದ ಈ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿ ಜನರ ಬೇಡಿಕೆಗೆ ಧ್ವನಿಗೂಡಿಸಿದ ಕುಮಾರಸ್ವಾಮಿ: ರೈಲ್ವೆ ಸಚಿವರಿಗೆ ಮನವಿ ಮಾಡಿದ್ದೇನು ಗೊತ್ತಾ