Webdunia - Bharat's app for daily news and videos

Install App

ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಕ್ಕಳ ಜೊತೆ ಜಾನವಿ ಸಾರಾ ಡೇಟಿಂಗ್

Webdunia
ಶನಿವಾರ, 16 ಜುಲೈ 2022 (14:03 IST)
ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದ 7ನೇ ಸೀಸನ್​ನ ಎರಡನೇ ಎಪಿಸೋಡ್​ನಲ್ಲಿ ಬಾಲಿವುಡ್​ ನಟಿಯರಾದ ಸಾರಾ ಅಲಿ ಖಾನ್​ ಮತ್ತು ಜಾಹ್ನವಿ ಕಪೂರ್​ ಅತಿಥಿಗಳಾಗಿ ಒಟ್ಟಿಗೆ ಪಾಲ್ಗೊಂಡಿದ್ದರು.
ಸಾರಾ ಅಲಿ ಖಾನ್​ ಮತ್ತು ಜಾಹ್ನವಿ ಕಪೂರ್​ ಒಂದೇ ಕುಟುಂಬದ ಇಬ್ಬರು ಸಹೋದರರ ಜೊತೆ ಈ ಹಿಂದೆ ಡೇಟಿಂಗ್​ ಮಾಡಿದ್ದರು. ಅದರ ಬಗ್ಗೆ ಈ ಶೋನಲ್ಲಿ ಏನಾದರೂ ಹೇಳುತ್ತೀರಾ? ಎಂದು ಕರಣ್​ ಜೋಹರ್​ ಪ್ರಶ್ನಿಸಿದ್ದಕ್ಕೆ ಇಬ್ಬರು ದಿಗ್ಭ್ರಾಂತರಾದರು. ಇದೆಲ್ಲ, ಇವರಿಗೆ ಹೇಗೆ ಗೊತ್ತಾಯಿತು ಎಂದು ಒಂದು ಕ್ಷಣ ಗಲಿಬಿಲಿಗೊಂಡರು. ತಕ್ಷಣ ಜಾಹ್ನವಿ ಕಡೆ ನೋಡಿದ ಸಾರಾ, ಈ ಬಗ್ಗೆ ಕೇಳುತ್ತಾರೆ ಅಂತಾ ನಿನಗೆ ಮೊದಲೇ ತಿಳಿದಿತ್ತಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಾಹ್ನವಿ ನನಗೆ ಗೊತ್ತಿರಲಿಲ್ಲ ಎಂದರು. ಬಳಿಕ ಮಾತನಾಡಿದ ಕರಣ್​, ನನ್ನ ಮಾತಿನ ಅರ್ಥ ಏನೆಂದರೆ, ನೀವು ಈ ಹಿಂದೆ ಇಬ್ಬರು ಸಹೋದರರ ಜೊತೆ ಡೇಟಿಂಗ್​ ಮಾಡಿದ್ದಿರಿ. ನಮ್ಮ ಮೂವರ ನಡುವೆ ಇರುವ ಸಾಮಾನ್ಯತೆ ಏನೆಂದರೆ, ನಾನಿದ್ದ ಕಟ್ಟಡದಲ್ಲಿ ಆ ಸಹೋದರರು ವಾಸಿಸುತ್ತಿದ್ದರು ಎಂದು ಕರಣ್ ಹೇಳಿದರು. ಇದರಿಂದ ಸಾರಾ ಮತ್ತು ಜಾಹ್ನವಿ ಚಕಿತರಾದರು.
 
ಯಾವಾಗ ಕರಣ್​ ಈ ವಿಚಾರ ಪ್ರಸ್ತಾಪಿಸಿದರೋ ಸಾಮಾಜಿಕ ಜಾಲತಾಣದಲ್ಲಿ ಆ ಇಬ್ಬರು ಸಹೋದರರು ಯಾರು ಎಂಬ ಹುಡುಕಾಟ ಶುರುವಾಯಿತು. ಕೊನೆಗೂ ಆ ಇಬ್ಬರು ಸಹೋದರರನ್ನು ಹುಡುಕಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪೋಸ್ಟ್​ ಮಾಡಿದ್ದಾರೆ.
 
ಆ ಇಬ್ಬರು ಸಹೋದರರು ಯಾರು ಅಂದರೆ, ವೀರ್​ ಪಹಾರಿಯ ಮತ್ತು ಶಿಖರ್​ ಪಹಾರಿಯ. ಇವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶಿಲ್​ ಕುಮಾರ್​ ಶಿಂಧೆ ಅವರ ಮೊಮ್ಮಕ್ಕಳು. ಜಾಹ್ನವಿ ಮತ್ತು ಸಾರಾ ಜೊತೆ ಇವರಿಬ್ಬರು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೀರ್​ ಪಹಾರಿಯ ಜೊತೆ ಸಾರಾ ಅಲಿ ಖಾನ್​ ಮತ್ತು ಶಿಖರ್​ ಪಹಾರಿಯ ಜತೆ ಜಾಹ್ನವಿ ಕಪೂರ್​ ಡೇಟಿಂಗ್​ ಮಾಡಿದ್ದರು ಎಂಬ ವಿಚಾರ ಇದೀಗ ಬಹಿರಂಗವಾಗಿದೆ. ಈ ವಿಚಾರವಾಗಿ ಸಾರಾ ಮತ್ತು ಜಾಹ್ನವಿ ಹಾಗೂ ಇಬ್ಬರು ಸಹೋದರರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಬಾಲಿವುಡ್​ನಲ್ಲಿ ಮಾತ್ರ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

Bakrid: ಅಲ್ಲಾಹನಿಗಾಗಿ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ, ಆರೋಪಿಗಳ ಬಾಯಿಂದ್ದ ಬೆಚ್ಚಿಬೀಳಿಸುವ ಮಾಹಿತಿ ಹೊರಕ್ಕೆ

Covid 19: ದೇಶದಲ್ಲಿ ಏರುತ್ತಲೇ ಇದೆ ಕೋವಿಡ್ 19 ಪ್ರಕರಣಗಳು, ಸಕ್ರಿಯ ಪ್ರಕರಣಗಳ ಸಂಖ್ಯೆ ಹೀಗಿದೆ

Chitradurga Renukaswamy: ಹತ್ಯೆಯಾಗಿ ಇಂದಿಗೆ ಒಂದು ವರ್ಷ, ಪೂಜೆ ಸಲ್ಲಿಸಿದ ಕುಟುಂಬಸ್ಥರು

ಮುಂದಿನ ಸುದ್ದಿ
Show comments