Select Your Language

Notifications

webdunia
webdunia
webdunia
webdunia

ಕನಕಪುರದಲ್ಲಿ ಯೇಸು ಪ್ರತಿಮೆ ನಿರ್ಮಾಣ; ಡಿಕೆಶಿ ಪರ ಬ್ಯಾಟ್ ಬೀಸಿದ ಬಿಜೆಪಿ ನಾಯಕ

ಕನಕಪುರದಲ್ಲಿ ಯೇಸು ಪ್ರತಿಮೆ ನಿರ್ಮಾಣ; ಡಿಕೆಶಿ ಪರ ಬ್ಯಾಟ್ ಬೀಸಿದ ಬಿಜೆಪಿ ನಾಯಕ
ಚಿಕ್ಕಬಳ್ಳಾಪುರ , ಶನಿವಾರ, 28 ಡಿಸೆಂಬರ್ 2019 (09:33 IST)
ಚಿಕ್ಕಬಳ್ಳಾಪುರ : ರಾಮನಗರದ ಕನಕಪುರದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಕಾಂಗ್ರೆಸ್ ನಾಯಕ ಡಿಕೆಶಿವಕುಮಾರ್ ವಿರುದ್ಧ ಬಿಜೆಪಿ ನಾಯಕರೆಲ್ಲರೂ ಕಿಡಿಕಾರಿದ್ದರೆ ಸಿಟಿ ರವಿ ಅವರು ಮಾತ್ರ ಅವರ ಪರವಾಗಿ ಪ್ರತಿಕ್ರಿಯಿಸಿದ್ದಾರೆ.



ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯೇಸು ಪ್ರತಿಮೆಯ ಕಾರ್ಯ ಸದುದ್ದೇಶದಿಂದ ಆಗಿದ್ದರೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ ಅದು ರಾಜಕೀಯ ಕಾರಣಕ್ಕೆ ಮಾತ್ರ ಆಗಬಾರದು, ದೇವನೊಬ್ಬ ನಾಮ ಹಲವು ಎನ್ನುವುದು ಹಿಂದೂ ಧರ್ಮದ ತತ್ವ . ಯಾರನ್ನೂ ಯಾವ ರೂಪದಲ್ಲಿ ಪೂಜೆ ಮಾಡಿದರೂ ಭಗವಂತ ಒಬ್ಬನೇ. ನಮ್ಮ ದೇಶದಲ್ಲಿ ಸರ್ವಧರ್ಮ ಸಮಭಾವದ ಸಂಸ್ಕೃತಿ ಉಳಿಯಬೇಕಿದೆ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಗೆ ಗೃಹಸಚಿವ ಅಮಿತ್ ಶಾ ಸವಾಲು