Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನ ಇಂದಿರಾ ಕ್ಯಾಂಟೀನ್ ಗೆ ಜೆಡಿಎಸ್ ನ ನಮ್ಮ ಅಪ್ಪಾಜಿ ಕ್ಯಾಂಟೀನ್ ಸ್ಪರ್ಧೆ!

ಕಾಂಗ್ರೆಸ್ ನ ಇಂದಿರಾ ಕ್ಯಾಂಟೀನ್ ಗೆ ಜೆಡಿಎಸ್ ನ ನಮ್ಮ ಅಪ್ಪಾಜಿ ಕ್ಯಾಂಟೀನ್ ಸ್ಪರ್ಧೆ!
Bangalore , ಶುಕ್ರವಾರ, 19 ಮೇ 2017 (07:25 IST)
ಬೆಂಗಳೂರು: ಈ ಸಾಲಿನ ಬಜೆಟ್ ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಘೋಷಣೆ ಮಾಡಿತ್ತು. ಅಗ್ಗದ ಬೆಲೆಗೆ ತಿಂಡಿ, ಊಟ ಇದರ ಪರಿಕಲ್ಪನೆ.

 
ಆದರೆ ಕಾಂಗ್ರೆಸ್ ಗೆ ಸೆಡ್ಡು ಹೊಡೆಯುವಂತೆ ಜೆಡಿಎಸ್ ವತಿಯಿಂದ ಅಪ್ಪಾಜಿ ಕ್ಯಾಂಟೀನ್ ಆರಂಭಿಸಲಾಗುತ್ತಿದೆಯಂತೆ. ಎಚ್.ಡಿ.ದೇವೇಗೌಡರ ಜನುಮದಿನವಾದ ನಿನ್ನೆ ಜೆಡಿಎಸ್ ನಾಯಕ ಟಿ. ಶರವಣ ಈ ವಿಷಯ ಪ್ರಕಟಿಸಿದ್ದಾರೆ.

ಅದರಂತೆ ಇನ್ನು ಒಂದು ತಿಂಗಳಲ್ಲಿ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ಮೊದಲು ಬಸವನಗುಡಿಯಲ್ಲಿ ಶಾಖೆ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ರೈತರು ಬೆಳೆದ ತರಕಾರಿಗಳನ್ನು ನೇರವಾಗಿ ಖರೀದಿಸಿ ಇಲ್ಲಿನ ಆಹಾರ ವಸ್ತುಗಳ ತಯಾರಿಗೆ ಬಳಸಲಾಗುವುದು. ಕಾಂಗ್ರೆಸ್ ನ ಕ್ಯಾಂಟೀನ್ ನಂತೆ 5 ರೂ. ತಿಂಡಿ, 10 ರೂ. ಊಟ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಜೆ ತೀರ್ಪು ನಾವೇಕೆ ಒಪ್ಪಬೇಕೆಂದ ಪಾಕಿಸ್ತಾನ