Webdunia - Bharat's app for daily news and videos

Install App

ಶಾಸಕರ ಮೇಲೆ ನಿಗಾ ಇಡಲು ಜೆಡಿಎಸ್ ಪ್ಲ್ಯಾನ್

Webdunia
ಸೋಮವಾರ, 26 ಜೂನ್ 2023 (17:37 IST)
ಜೆಡಿಎಸ್ ತನ್ನ ಶಾಸಕರ ರಕ್ಷಣೆಗೆ ಹೊಸ ಚಿಂತನೆ ನಡೆಸಿದ್ದು, ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು "ಸೀಕ್ರೆಟ್ ಸೆಲ್" ರಚನೆಗೆ ತೀರ್ಮಾನ ಮಾಡಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ಶಾಸಕರ ರಕ್ಷಣೆಗೆ ಹೊಸ ಐಡಿಯಾ ಮಾಡಿದೆ. ಆಪರೇಷನ್ ಕಮಲ, ಆಪರೇಷನ್ ಹಸ್ತಗಳನ್ನ ತಡೆಯಲು ಜೆಡಿಎಸ್ ಹೊಸ ಚಿಂತನೆ ನಡೆಸಿದ್ದು, ಹೊಸ‌ ಶಾಸಕರ ಮೇಲೆ ನಿಗಾ ಇಡಲು ಸೆಲ್ ಸೀಕ್ರೆಟ್ ರಚಿಸಲು ತೀರ್ಮಾನ ಮಾಡಿದೆ. ವಾರ್ ರೂಮ್​ನಲ್ಲಿ ನಿಗಾ ಘಟಕ ಸ್ಥಾಪಿಸಿ, ಶಾಸಕರ ಮೇಲೆ ತಂಡವೊಂದು ನಿಗಾ ಇಡಲಿದೆ. ಈ‌‌ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಜಮೀರ್ ಮತ್ತು ಚಲುವರಾಯಸ್ವಾಮಿ ತಂಡ ಕಾಂಗ್ರೆಸ್ ಸೇರ್ಪಡೆಯಾಗಿತ್ತು. ಜೊತೆಗೆ ಮೈತ್ರಿ ಸರ್ಕಾರದಲ್ಲಿದ್ದ ಹೆಚ್.ವಿಶ್ವನಾಥ್, ಕೆ.ಸಿ.ನಾರಾಯಣಗೌಡ ಸೇರಿದಂತೆ ಶಾಸಕರು ‌ಬಿಜೆಪಿ ಕೈ ಹಿಡಿದಿದ್ದರು. ಇದರಿಂದ ಪಾಠ ಕಲಿತಿರುವ ಜೆಡಿಎಸ್ ವರಿಷ್ಠರು, ಮುಂದೆ ಶಾಸಕರು ಕೈ ತಪ್ಪಿ ಹೋಗದಂತೆ ತಡೆಯಲು ಈರೀತಿ ಚಿಂತನೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments