Webdunia - Bharat's app for daily news and videos

Install App

ದೇವೇಗೌಡರಿಗೆ ಸೆಡ್ಡು ಹೊಡೆದ ಜೆಡಿಎಸ್ ನಾಯಕರು

Webdunia
ಗುರುವಾರ, 16 ನವೆಂಬರ್ 2023 (14:00 IST)
ದೇವೇಗೌಡರಿಗೆ ಸೆಡ್ಡು ಹೊಡೆಯಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.ಗೌಡರನ್ನ ಹೊರಗಿಟ್ಟು ಕಾರ್ಯಕಾರಿಣಿ ಸಭೆ ನಡೆಸಲಾಗಿದೆ.ನಿನ್ನೆ  ರಾಷ್ಟ್ರೀಯ ನಾಯಕರು ಸಭೆ ನಡೆಸಿದ್ದಾರೆ.ಕೇರಳದ ತಿರುವನಂತಪುರದ ಆಕ್ಸನ್ ಗ್ರಾಫ್ಟ್ ವಿಲೇಜ್ ನಲ್ಲಿ ಸಭೆ ನಡೆಲಾಗಿತ್ತು.ಕೇರಳದ ಅಧ್ಯಕ್ಷ ಮ್ಯಾಥ್ಯೂಸ್,ಕರ್ನಾಟಕದ ಸಿ.ಎಂ ಇಬ್ರಾಹಿಂ,ಆಂಧ್ರ,ತೆಲಂಗಾಣ,ಉತ್ತರಖಂಡ,ಹರ್ಯಾಣ,ಪಂಜಾಬ್ ನ ಜೆಡಿಎಸ್ ನಾಯಕರು ಭಾಗಿಯಾಗಿದ್ದರು.
 
ಕಾರ್ಯಕಾರಿಣಿಯಲ್ಲಿ ನಿರ್ಣಯ ಅಂಗೀಕಾರಕ್ಕೆ ಜೆಡಿಎಸ್ ವರಿಷ್ಠರಿಗೆ ನೊಟೀಸ್ ನೀಡಲು ತೀರ್ಮಾನ ಮಾಡಲಾಗಿದ್ದು,ಬಿಜೆಪಿ ಜೊತೆ ಮೈತ್ರಿ ನಿಯಮಗಳ ವಿರುದ್ಧವಾಗಿದೆ.ಸೆಕ್ಯೂಲರಿಸಂ ವಿರುದ್ಧವಾಗಿ ಮೈತ್ರಿಯಾಗಿದೆ.ಜೆಡಿಎಸ್ ಬೈಲಾದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.ಸೆಕ್ಯೂಲರ್ ಹೊರತಾದ ಪಕ್ಷಗಳ ಜೊತೆ ಮೈತ್ರಿ ಇಲ್ಲ.ಆದರೆ ಕೋಮುವಾದಿ ಜೊತೆ ಮೈತ್ರಿ ಮಾಡಿಕೊಂಡಿದ್ದೀರ.ಬೈಲಾ ಪ್ರಕಾರ ಇಂತಹ ಮೈತ್ರಿ ಅಪವಿತ್ರವಾದದ್ದು,ಹಾಗಾಗಿ ಮೈತ್ರಿಯ ಬಗ್ಗೆ ನಿಮ್ಮ ಸ್ಪಷ್ಟ ತೀರ್ಮಾನ ತಿಳಿಸಿ.ಮೈತ್ರಿ ಮುಂದುವರಿಸಿದರೆ ಪಕ್ಷದ ಸಿದ್ಧಾಂತಕ್ಕೆ ವಿರುದ್ಧ,ಪಕ್ಷದ ಮೇಲಿನ ನಿಮ್ಮ‌ಹಿಡಿತ ತಪ್ಪಲಿದೆ.ಡಿಸೆಂಬರ್ ೯ ರೊಳಗೆ ತಮ್ಮ ತೀರ್ಮಾನ ತಿಳಿಸಬೇಕು ಎಂದು ಈ ಬಗ್ಗೆ  ಎಕ್ಸಿಕ್ಯೂಟೀವ್ ಕಮಿಟಿ ನಿರ್ಣಯ ಕೈಗೊಂಡಿದೆ.
 
ಬೆಂಗಳೂರಿನಲ್ಲಿ ಕೌನ್ಸಿಲ್ ಸಭೆ ನಡೆಸಲು ನಿರ್ಧಾರಿಸಿದ್ದು,ಆ ಸಭೆಯಲ್ಲಿ ತಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಬಿಂಬಿತವಾಗಿದೆ.ಒರಿಜಿನಲ್ ಜೆಡಿಎಸ್ ಎಂದು ಸಾರಲು ಜೆಡಿಎಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಟೋ ಚಲಾಯಿಸುತ್ತಾ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದ ಚಾಲಕ: ಮಹಿಳೆ ಮಾಡಿದ್ದೇನು ನೋಡಿ Video

Karnataka Weather: ಇಂದು ಯಾವ ಜಿಲ್ಲೆಗಳಿಗೆ ರೆಡ್ ಅಲರ್ಟ್, ಆರೆಂಜ್ ಅಲರ್ಟ್ ಇಲ್ಲಿದೆ ವಿವರ

ಕರಾವಳಿಯಲ್ಲಿ ರಣಭೀಕರ ಮಳೆ ನಡುವೆ ಮುಂದಿನ 24ಗಂಟೆ ಹೇಗಿರಲಿದೆ ಗೊತ್ತಾ ಹವಾಮಾನ

ಭ್ರಷ್ಟಾಚಾರ ಆರೋಪ ಹೊತ್ತಿರುವವರು, ಪಬ್‌ಗಳಲ್ಲಿ ಗಲಾಟೆ ಮಾಡಿದವರಿಗೆ ಕೊನೆಗೂ ಮಂತ್ರಿಸ್ಥಾನ

ಕೊನೆಗೂ ಡಿಕೆ ಶಿವಕುಮಾರ್ ಸಂಪುಟ ಸೇರಿದ 19 ಸಚಿವರು ಇವರೇ

ಮುಂದಿನ ಸುದ್ದಿ
Show comments