Select Your Language

Notifications

webdunia
webdunia
webdunia
webdunia

ರಾಜ್ಯದಲ್ಲೂ ಬರ, ಸದನದಲ್ಲಿ ಸಚಿವರಿಗೂ ಬರ: ಜೆಡಿಎಸ್ ಕಿಡಿ

ರಾಜ್ಯದಲ್ಲೂ ಬರ, ಸದನದಲ್ಲಿ ಸಚಿವರಿಗೂ ಬರ: ಜೆಡಿಎಸ್ ಕಿಡಿ
ಬೆಂಗಳೂರು , ಸೋಮವಾರ, 20 ಮಾರ್ಚ್ 2017 (13:42 IST)
ರಾಜ್ಯದಲ್ಲಿ ಬೀಕರ ಬರ ಕಾಡುತ್ತಿದ್ದರೆ ಸದನದಲ್ಲೂ ಸಚಿವರ ಬರ ಕಾಡುತ್ತಿದೆ ಎಂದು ಜೆಡಿಎಸ್ ಶಾಸಕ ಎಂ.ಟಿ ಕೃಷ್ಣಪ್ಪ ಗುಡುಗಿದ್ದಾರೆ.
 
ವಿಧಾನಸಭೆ ಕಲಾಪದ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕೇವಲ ಇಬ್ಬರು ಸಚಿವರು ಕೆಲವೇ ಕೆಲ ಶಾಸಕರು ಮಾತ್ರ ಉಪಸ್ಥಿತರಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
 
ಬಜೆಟ್ ಮೇಲೆ ವಿಪಕ್ಷಗಳ ನಾಯಕರು ಮಾತನಾಡುವ ಸಂದರ್ಭದಲ್ಲಿ ಸಚಿವರು, ಶಾಸಕರು ಗೈರು ಹಾಜರಾಗುತ್ತಾರೆ ಎಂದರೆ ಯಾರೊಂದಿಗೆ ಚರ್ಚೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಅವರೊಂದಿಗೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ, ಸಿಎಂ ಸಿದ್ದರಾಮಯ್ಯರಿಗೆ ಅವರ ಸಚಿವರ ಮತ್ತು ಶಾಸಕರ ಮೇಲೆ ಹಿಡಿತವಿಲ್ಲ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗುಂಡ್ಲುಪೇಟೆ: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿಚಾರ್ಜ್