Select Your Language

Notifications

webdunia
webdunia
webdunia
webdunia

ಜಂತಕಲ್ ಹಗರಣ: ಮಾಜಿ ಸಿಎಂ ಧರ್ಮಸಿಂಗ್‍‌ಗೆ ಎಸ್‌ಐಟಿ ನೋಟಿಸ್

ಜಂತಕಲ್ ಗಣಿಗಾರಿಕೆ
ಬೆಂಗಳೂರು , ಸೋಮವಾರ, 24 ಜುಲೈ 2017 (13:40 IST)
ಜಂತಕಲ್ ಗಣಗಾರಿಕೆ ಅಕ್ರಮ ನವೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಎಸ್‌‍ಐಟಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ.
 
ಜುಲೈ 30 ರಂದು ಎಸ್‌ಐಟಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಮಾಜಿ ಸಿಎಂ ಧರ್ಮಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. 
 
ಇಂದು ಎಸ್‌ಐಟಿ ಅಧಿಕಾರಿಗಳ ಮುಂದೆ ಹಾಜರಾದ ಧರ್ಮಸಿಂಗ್ ಪುತ್ರ, ತಂದೆಗೆ ಅನಾರೋಗ್ಯದಿಂದಾಗಿ ನಡೆಯಲು ಸಾಧ್ಯವಿಲ್ಲವಾದ್ದರಿಂದ ಜುಲೈ 30ರೊಳಗೆ ಅವರಿಂದ ಲಿಖಿತ ಉತ್ತರ ಕೊಡಿಸುವುದಾಗಿ ಮನವಿ ಮಾಡಿದ್ದಾರೆ.
 
ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣ ಮಾಜಿ ಸಿಎಂಗಳಾದ ಕುಮಾರಸ್ವಾಮಿ, ಯಡಿಯೂರಪ್ಪ, ಧರ್ಮಸಿಂಗ್ ಸೇರಿದಂತೆ ಇನ್ನಿತರ ರಾಜಕಾರಣಿಗಳಿಗೆ ಕಂಟಕವಾಗಿ ಪರಿಣಮಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಗಿಲ್ ಯುದ್ಧದಲ್ಲಿ ಕೂದಲೆಳೆಯಲ್ಲಿ ಪ್ರಾಣ ಉಳಿಸಿಕೊಂಡಿದ್ದ ಮುಷರಫ್, ನವಾಜ್ ಷರೀಫ್