Select Your Language

Notifications

webdunia
webdunia
webdunia
webdunia

ಜನೋತ್ಸವ ಕಾರ್ಯಕ್ರಮ ನಾಳೆ ನಡೆಯಲಿದೆ : ಸುಧಾಕರ್

ಜನೋತ್ಸವ ಕಾರ್ಯಕ್ರಮ ನಾಳೆ ನಡೆಯಲಿದೆ : ಸುಧಾಕರ್
ಚಿಕ್ಕಬಳ್ಳಾಪುರ , ಬುಧವಾರ, 7 ಸೆಪ್ಟಂಬರ್ 2022 (14:26 IST)
ಚಿಕ್ಕಬಳ್ಳಾಪುರ : ನಿಗದಿಯಂತೆ ನಾಳೆ(ಗುರುವಾರ) ಜನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಾಳೆ ಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಸಂಬಂಧ ಆಡಿಯೋ ಸಂದೇಶ ಕಳುಹಿಸಿರುವ ಸಚಿವರು, ಪ್ರೋಗ್ರಾಂ ಈಸ್ ಆನ್. ಎಲ್ಲಾ ಮುಖಂಡರು ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಬರಬೇಕು.

ಈಗಿನಿಂದಲೇ ಎಲ್ಲಾ ಮುಖಂಡರಿಗೂ ಹೇಳಿಬಿಡಿ. ಕಾರ್ಯಕ್ರಮ ಮುಂದುವರಿಯುತ್ತೆ. 8 ಗಂಟೆಗೆ ಸರಿಯಾಗಿ ಕಾರ್ಯಕ್ರಮ ನಡೆಯುತ್ತೆ. ಎಲ್ಲರಿಗೂ ನೀಡಿದ ಜವಾಬ್ದಾರಿಯನ್ನು ಚಾಚು ತಪ್ಪದಂತೆ ಮಾಡಿ. ನಾನು ಎಲ್ಲವನ್ನೂ ಗಮನಿಸುತ್ತಿರುತ್ತೇನೆ ಎಂದು ತಿಳಿಸಿದ್ದಾರೆ.

ಸದ್ಯ ಉಮೇಶ್ ಕತ್ತಿ ನಿಧನಕ್ಕೆ 1 ದಿನ ಶೋಕಾಚರಣೆ ನಡೆಸುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದರು. ಈಗ ಶೋಕಾಚರಣೆ ನಡುವೆ ಸರ್ಕಾರ ಜನೋತ್ಸವಕ್ಕೆ ಸಂಪೂರ್ಣ ಸಿದ್ಧತೆ ನಡೆಸಲಾಗುತ್ತಿದೆ.

ಸಚಿವ ಉಮೇಶ್ ಕತ್ತಿ ನಿಧನದ ನಡುವೆಯೂ ನಾಳೆ ಜನೋತ್ಸವ ಬೇಡ ಎಂಬ ಅಭಿಪ್ರಾಯವನ್ನು ಹಲವು ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಆದರೆ ಈಗ ಈ ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಫಸ್ಟ್ ಟೈಂ ಸಂಪ್ರದಾಯ ಕೈಬಿಟ್ಟ ಕೇರಳ ಚರ್ಚ್!