Webdunia - Bharat's app for daily news and videos

Install App

ಸಿದ್ಧಾರೂಢ ಮಠಕ್ಕೆ ಜನಾರ್ದನ ರೆಡ್ಡಿ ಭೇಟಿ

Webdunia
ಮಂಗಳವಾರ, 20 ಡಿಸೆಂಬರ್ 2022 (20:17 IST)
ಹುಬ್ಬಳ್ಳಿ ಗೆಳೆಯರು ನನ್ನ ಜೊತೆ ಬರ್ತಾರೆ ಅನ್ನೋದನ್ನ ಆ ದೇವರೇ ಬಲ್ಲ. ನನ್ನ ಮುಂದಿನ ನಡೆಯನ್ನ ಡಿಸೆಂಬರ್ 25 ರಂದು ಬಹಿರಂಗಪಡಿಸುತ್ತೇನೆ. ಅಲ್ಲಿಯವರೆಗೂ ಕಾಯಿರಿ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ನಿಗೂಢವಾಗಿ ಮಾತನಾಡಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ, ಸಿದ್ಧಾರೂಢ ಹಾಗೂ ಗಳಗನಾಥರ ಗದ್ದುಗೆ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ತಂಬೂರಿ ಹೆಗಲಿಗೆ ಹಾಕಿಕೊಂಡು ಸಿದ್ಧಾರೂಢರ ಆಶೀರ್ವಾದ ಪಡೆದರು. ದರ್ಶನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜನಾರ್ದನ ರೆಡ್ಡಿ, ಸಿದ್ದಾರೂಢರ ಮಠಕ್ಕೆ ಶುಭ ಸೋಮವಾರ ಬಂದಿದ್ದೇನೆ. ಬೆಳಗ್ಗೆ ತುಮಕೂರು ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿದ್ದೆ. ನಾನೇ ಮಂಗಳಾರತಿ, ವಿಶೇಷ ಪೂಜೆ ಮಾಡಿದ್ದೇನೆ ಎಂದು ತಿಳಿಸಿದರು. ಸಿದ್ದಾರೂಢರ ಅಂಗಾರ ಜಗಕೆಲ್ಲಾ ಬಂಗಾರ ಎಂಬುದು ಜಗಜ್ಜಾಹೀರು. ನನ್ನ ಭವಿಷ್ಯದ ರಾಜಕೀಯ, ಖಾಸಗಿ ಜೀವನ ರೂಪಿಸಲು ಆಶೀರ್ವಾದ ಪಡೆಯಲು ಬಂದಿದ್ದೇನೆ. ಸಿದ್ದಾರೂಢರ ಜೋಳಿಗೆ ಜಗಕೆಲ್ಲಾ ಹೋಳಿಗೆ ಎಂಬ ವಾಣಿ ಇದೆ. ಸಿದ್ದಾರೂಢರ ಜೋಳಿಗೆಯಿಂದ ನನಗೂ ಒಂದು ಹೋಳಿಗೆ ಕೊಡಲಿ ಅಂತ ಬೇಡಲು ಬಂದಿದ್ದೇನೆ. ಬರುವ ದಿನಗಳಲ್ಲಿ ಬದುಕಲು ಶ್ರೀಗಳ ಆಶೀರ್ವಾದ ಬೇಕು. ಸ್ವಾಮೀಜಿ ಮುಂದೆ ನಾನು ಬೇಡಿಕೊಂಡಿದ್ದನ್ನು ಈಗ ಹೇಳಲ್ಲ. ಬೆಂಗಳೂರಿನಲ್ಲಿ ಎಲ್ಲವನ್ನೂ ಬಹಿರಂಗಪಡಿಸ್ತೇನೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

E Tukaram: ಬಳ್ಳಾರಿ ಚುನಾವಣೆಗೆ ಬರೋಬ್ಬರಿ 21 ಕೋಟಿ ಹಣ ಬಳಕೆ: ಸಂಸದ ಇ ತುಕರಾಂ ಇಡಿ ವಶಕ್ಕೆ

Gold price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvamshi murder: ಗುಡ್ಡ ಹತ್ತಿ ಸುಸ್ತು ಎಂದಿದ್ದ ಹಂತಕರಿಗೆ ಸೋನಂ ನೀಡಿದ್ದ ಆಫರ್ ಏನು

Raj Raghuvamshi murder: ಸೋನಂಳನ್ನು ಅಕ್ಕ ಎನ್ನುತ್ತಿದ್ದ ಮರ್ಡರ್ ಆದ ದಿನವೂ ಊರಲ್ಲೇ ಇದ್ದ

Indore Raja Raghuvamshi murder: ವಿಮಾನ ನಿಲ್ದಾಣದಲ್ಲೇ ಆರೋಪಿ ರಾಜ್ ಕುಶ್ವಾಹ್ ಗೆ ಕಪಾಳ ಮೋಕ್ಷ ವಿಡಿಯೋ

ಮುಂದಿನ ಸುದ್ದಿ
Show comments