Webdunia - Bharat's app for daily news and videos

Install App

ಪ್ರಕಾಶ್ ರೈಗೆ ದೀರ್ಘದಂಡ ನಮಸ್ಕಾರ ಎಂದ ಜಗ್ಗೇಶ್

Webdunia
ಬುಧವಾರ, 21 ಫೆಬ್ರವರಿ 2018 (08:26 IST)
ಬೆಂಗಳೂರು: ಜಗ್ಗೇಶ್ ಮತ್ತು ಪ್ರಕಾಶ್ ರೈ ನಡುವಿನ ಟ್ವಿಟರ್ ವಾರ್ ಇನ್ನೂ ಮುಂದುವರಿದಿದೆ. ಟ್ವಿಟರ್ ನಲ್ಲಿ ತಮ್ಮನ್ನು ಟೀಕಿಸಿದ್ದಕ್ಕೆ ತಿರುಗೇಟು ನೀಡಿದ್ದ ಪ್ರಕಾಶ್ ರೈ ಜಗ್ಗೇಶ್ ಗೆ ದೊಡ್ಡ ನಮಸ್ಕಾರ ಎಂದಿದ್ದಕ್ಕೆ ಜಗ್ಗೇಶ್ ತಿರುಗೇಟು ನೀಡಿದ್ದಾರೆ.
 

ಮೋದಿ ಧೋರಣೆಗಳನ್ನು ವಿರೋಧಿಸಿದ್ದಕ್ಕೇ ಟ್ವಿಟರ್ ನಲ್ಲಿ ಕೀಳು ಅಭಿರುಚಿಯ ಮಾತುಗಳನ್ನು ನನ್ನ ಬಗ್ಗೆ ಹೇಳಿರುವ ಜಗ್ಗೇಶ್ ಗೆ ದೊಡ್ಡ ನಮಸ್ಕಾರ ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದರು.

ಇದಕ್ಕೀಗ ತಿರುಗೇಟು ನೀಡಿರುವ ಜಗ್ಗೇಶ್, ‘ನನ್ನ ನೇರ ನುಡಿ, ಭವಿಷ್ಯ ಅವರಿಗೆ ಅರ್ಥವಾಗಲಿಲ್ಲ. ದೌರ್ಭಾಗ್ಯ! ನನ್ನ ಬದುಕು ನನ್ನದು. ನಾನು ಹಣ, ಹೆಸರಿಗಿಂತ ಪ್ರಾಮಾಣಿಕನಾಗಿ ಬದುಕಲು ಇಷ್ಟಪಡುವೆ! ನನ್ನ ಗುಣ ಹಿಡಿಸಿದವರು ಒಪ್ಪುತ್ತಾರೆ! ಇಷ್ಟವಾಗದವರು ದೂರ ಉಳಿಯುತ್ತಾರೆ! ನಾಳೆ ನಮ್ಮ ಹೆಸರು, ದುಡ್ಡು ನಶ್ವರ! ಸತ್ತಾಗ ಕಳಚುವುದು ಉಡುದಾರ! ಇದು ಬದುಕಿನ ಸಾರ! ನಿಮಗೆ ದೀರ್ಘದಂಡ ನಮಸ್ಕಾರ’ ಎಂದು ಜಗ್ಗೇಶ್ ತಿರುಗೇಟು ನೀಡಿದ್ದಾರೆ. ಈ ಟ್ವೀಟ್ ವಾರ್ ಎಲ್ಲಿವರೆಗೆ ಮುಟ್ಟುತ್ತದೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments