ಮೋದಿ ಬರುತ್ತಿದ್ದಾರೆಂದು ಜಗ್ಗೇಶ್ ಭಾವುಕರಾಗಿದ್ದು ಯಾಕೆ?!

Webdunia
ಶುಕ್ರವಾರ, 4 ಮೇ 2018 (09:18 IST)
ಬೆಂಗಳೂರು: ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಲು ತಮ್ಮದೇ ಕ್ಷೇತ್ರಕ್ಕೆ ಬರುತ್ತಿದ್ದಾರೆಂದು ನವರಸನಾಯಕ, ಬಿಜೆಪಿ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಜಗ್ಗೇಶ್ ಭಾವುಕರಾಗಿದ್ದರು.

ಮೋದಿ ಆಗಮನಕ್ಕೂ ಮೊದಲೇ ಟ್ವಿಟರ್ ನಲ್ಲಿ ಕ್ಷಣ ಕ್ಷಣಕ್ಕೂ ಟ್ವೀಟ್ ಮಾಡುತ್ತಿದ್ದ ಜಗ್ಗೇಶ್, ನನ್ನ ಕ್ಷೇತ್ರಕ್ಕೆ ಅವರು ಬರುವುದನ್ನು ಕಾಯುತ್ತಿದ್ದೇನೆ ಎಂದಿದ್ದರು.

‘ಇಂದು ನನ್ನ ಬದುಕಿನಲ್ಲಿ ನೆನಪಿಡುವ ದಿನ. ವಿಶ್ವ, ರಾಷ್ಟ್ರ ಮೆಚ್ಚಿದ ನಾಯಕ ನರೇಂದ್ರ ಮೋದಿ ಭಾರತಾಂಬೆಯ ಹೆಮ್ಮೆಯ ಪುತ್ರನ ಆಶೀರ್ವಾದವನ್ನು ನೇರವಾಗಿ ಪಡೆಯುವ ಸುದಿನ. ಅಪ್ಪ –ಅಮ್ಮ ಇದ್ದಿದ್ದರೆ ಸಾರ್ಥಕವಾಯಿತು ಮಗನೇ ಎಂದು ಹರಸುತ್ತಿದ್ದರೇನೋ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲ, ಸಮಾವೇಶಕ್ಕೆ ಬರಲು ದಾರಿಯನ್ನೂ ಟ್ವಿಟರ್ ಮೂಲಕ ಹಾಕಿದ್ದರು.

ಬಳಿಕ ಸಮಾವೇಶದಲ್ಲಿ ಜಗ್ಗೇಶ್ ಸೀದಾ ಪ್ರಧಾನಿ ಮೋದಿ ಕಾಲಿಗೆರಗಿದರು. ಆ ಸಂದರ್ಭದಲ್ಲಿ ತಮ್ಮ ಭುಜ ತಟ್ಟಿ ಹಾರೈಸಿದ ಕ್ಷಣವನ್ನು ಟ್ವಿಟರ್ ನಲ್ಲಿ ಹಾಕಿಕೊಂಡು ಖುಷಿಪಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಸಿಎಂ ಬದಲಾವಣೆಗೆ ಬಿಗ್ ಟ್ವಿಸ್ಟ್: ರಾಜೀನಾಮೆಗೆ ಸಿದ್ದರಾಮಯ್ಯ ನಿರ್ಧಾರ?

ಸದ್ಯಕ್ಕೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಇಲ್ಲ: ದೆಹಲಿಗೆ ಸಿದ್ದು, ಡಿಕೆಶಿನ ಕರೆಸಿಕೊಂಡಿದ್ದು ಈ ಕಾರಣಕ್ಕೆ ಅಂತೆ

ಗಡಿ ಸುರಕ್ಷಿತವಾಗಿರುವಲ್ಲಿ ಪುರುಷರಿಗಿಂತ ಮಹಿಳೆಯರದ್ದೆ ಹೆಚ್ಚು ಪಾಲು: ಅಮಿತ್ ಶಾ ಶ್ಲಾಘನೆ

Rain Alert: ಕರಾವಳಿ ಮೀನುಗಾರರಿಗೆ ವಿಶೇಷ ಸೂಚನೆ ಕೊಟ್ಟ ಇಲಾಖೆ

FIFA ವರ್ಲ್ಡ್ ಕಪ್ 2026: ಭಾರತದಿಂದ ಆಯ್ಕೆಯಾದ ಮೊದಲ ಛಾಯಾಗ್ರಾಹಕಿ ಇವರೇ

ಮುಂದಿನ ಸುದ್ದಿ
Show comments