Select Your Language

Notifications

webdunia
webdunia
webdunia
webdunia

ಭ್ರಷ್ಟಾಚಾರ ಬಹಿರಂಗವಾಗುವ ಆತಂಕದಿಂದ ಡೈರಿ ಚರ್ಚೆಗೆ ನಕಾರ: ಶೆಟ್ಟರ್

ಭ್ರಷ್ಟಾಚಾರ ಬಹಿರಂಗವಾಗುವ ಆತಂಕದಿಂದ ಡೈರಿ ಚರ್ಚೆಗೆ ನಕಾರ: ಶೆಟ್ಟರ್
ಬೆಂಗಳೂರು , ಗುರುವಾರ, 16 ಮಾರ್ಚ್ 2017 (16:14 IST)
ಹೈಕಮಾಂಡ್‌ಗೆ ಕಪ್ಪು ಕಾಣಿಕೆ ಬಗ್ಗೆ ವಿವರವುಳ್ಳ ಡೈರಿಯ ಬಗ್ಗೆ ಚರ್ಚೆ ನಡೆದಲ್ಲಿ ಕಾಂಗ್ರೆಸ್ ನಾಯಕರ ಬಣ್ಣ ಬಯಲಾಗಲಿದೆ ಎನ್ನುವ ಆತಂಕದಿಂದ ಸದನದಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
 
ವಿಧಾನಸಭೆ ಕಲಾಪವನ್ನು ನಾಳೆಗೆ ಮುಂದೂಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಕ್ ಬ್ಯಾಕ್, ವರಿಷ್ಠರಿಗೆ ಕಪ್ಪ ಕೊಟ್ಟಿರುವ ಬಗ್ಗೆ ಕುತೂಹಲವಿದೆ. ಡೈರಿಯ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರೂ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಡೈರಿ ವಿಷಯ ಚರ್ಚೆಯಿಂದ ಮಂತ್ರಿಗಳ ಅಕ್ರಮ ಬಹಿರಂಗವಾಗಬಹುದು ಎನ್ನುವ ಆತಂಕದಿಂದ ಸರಕಾರ ವಿಪಕ್ಷಗಳೊಂದಿಗೆ ಚರ್ಚೆ ನಡೆಸುತ್ತಿಲ್ಲ ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗಾಗಿ ಎದ್ದು ನಿಂತಾಗ ಸಚಿವರು ಅಡ್ಡಿಪಡಿಸಿದ್ದಾರೆ. ಸಚಿವರು ಸ್ಪೀಕರ್ ರೂಲಿಂಗ್ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಿದರು.
 
ಸಚಿವರ ಭ್ರಷ್ಟಾಚಾರವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ.ಕಾಂಗ್ರೆಸ್ ಮುಖಂಡರು ರಾಜ್ಯವನ್ನು ಲೂಟಿ ಹೊಡೆಯುತ್ತಿರುವುದು ಜಗಜ್ಜಾಹಿರವಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೋಳಿ ಗುಂಗಲ್ಲಿ ಠಾಣೆಯೊಳಗೇ ಕಂಠಪೂರ್ತಿ ಕುಡಿದು ತೂರಾಡಿದ ಪೊಲೀಸರು