Webdunia - Bharat's app for daily news and videos

Install App

20 ವರ್ಷಗಳಿಂದ ಆಗದ್ದು ಈಗ ಆಗಿ ಬಿಟ್ಟಿದೆ…!

Webdunia
ಶನಿವಾರ, 13 ಏಪ್ರಿಲ್ 2019 (16:33 IST)
ಕಳೆದ ಎರಡು ದಶಕಗಳಿಂದ ಆಗದ್ದು ಈಗ ಖಾಲಿ ಆಗಿದೆ.
ಜನರು ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸುತ್ತಿದ್ದ ಹಳ್ಳ ಈ ಬಾರಿ ಖಾಲಿ ಆಗಿರೋದು ಅಲ್ಲಿನ ಜನರಲ್ಲಿ ಚಿಂತೆಗೀಡುಮಾಡಿದೆ. ಈ ಮೂಲಕ ಜನರೂ ಸೇರಿ ಮೂಕ ಪ್ರಾಣಿಗಳು ಕಂಗಾಲಾಗಿವೆ.

ರಾಯಚೂರು ಜಿಲ್ಲೆಯನ್ನು ಸತತವಾಗಿ ಕಾಡುತ್ತಿರುವ ಬರಗಾಲ ಕಳೆದ ಎರಡು ದಶಕಗಳಲ್ಲಿ ಬತ್ತದ ಹಳ್ಳವನ್ನು ಈ ಬಾರಿ ಖಾಲಿ ಮಾಡಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ-ಜಂಬಲದಿನ್ನಿ ಹಳ್ಳ ಯಾವುದೇ ಬರಗಾಲಕ್ಕೂ ಜಗ್ಗಿರಲಿಲ್ಲ. ಆದ್ರೆ ಈ‌ ಬಾರಿ ಹಳ್ಳದಲ್ಲಿ ನೀರಿಲ್ಲ.

ಪರಿಣಾಮ ಹಳ್ಳ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿರುವ ಜೊತೆಗೆ ಜನ ಜಾನುವಾರುಗಳಿಗೆ ಜೀವಜಲದ ಸಮಸ್ಯೆ ಉದ್ಭವಿಸಿದೆ. ಬಿಸಿಲೂರಿನ 20 ವರ್ಷಗಳಿಂದ ಬತ್ತದ ಹಳ್ಳ ಭೀಕರ ಬರಗಾಲಕ್ಕೆ ಖಾಲಿ ಆಗಿದೆ. ಈ ಹಳ್ಳ ಗಲಗ, ಮುಂಡರಗಿ, ಹುಲಿಗುಡ್ಡ, ಪರಪುರ ಗ್ರಾಮಗಳ ಜನರಿಗೆ ನೀರು ಒದಗಿಸುತ್ತಿತ್ತು.

ಭೀಕರ ಬರಗಾಲದ ಕಾರಣ ಕಳೆದ ಎರಡು ದಶಕಗಳಿಂದ ಬತ್ತದ ಅಮರಾಪುರ-ಜಂಬಲದಿನ್ನಿ ಹಳ್ಳ ಬತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments