Select Your Language

Notifications

webdunia
webdunia
webdunia
webdunia

ಐಟಿ ದಾಳಿಗೂ, ಪ್ರಧಾನಿಗೂ, ಸಂಬಂಧ ಕಲ್ಪಿಸುವುದು ಬಾಲಿಶ: ಶ್ರೀನಿವಾಸ್ ಪ್ರಸಾದ್

ಐಟಿ ದಾಳಿಗೂ, ಪ್ರಧಾನಿಗೂ, ಸಂಬಂಧ ಕಲ್ಪಿಸುವುದು ಬಾಲಿಶ: ಶ್ರೀನಿವಾಸ್ ಪ್ರಸಾದ್
ಬೆಂಗಳೂರು , ಬುಧವಾರ, 2 ಆಗಸ್ಟ್ 2017 (18:54 IST)
ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ನಡೆದ ಐಟಿ ದಾಳಿಗೂ ಪ್ರಧಾನಿ ಮೋದಿಗೂ ಸಂಬಂಧ ಕಲ್ಪಿಸುವುದು ಬಾಲಿಶತನ ಎಂದು ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
 
ಕಾಂಗ್ರೆಸ್ ಪಕ್ಷದ ಪ್ರಬುದ್ಧ ನಾಯಕರು ಕೂಡಾ ಪ್ರಧಾನಿ ಮೋದಿ ವಿರುದ್ಧ ಆರೋಪಿಸುತ್ತಿರುವುದು ಸರಿಯಲ್ಲ. ಅದು ಒಂದು ರೋಟಿನ್ ವರ್ಕ್. ದೇಶಾದ್ಯಂತ ಐಟಿ ದಾಳಿಗಳು ನಡೆಯುತ್ತಿರುತ್ತವೆ ಎಂದು ತಿಳಿಸಿದ್ದಾರೆ.
 
ದಾಖಲೆಗಳಿಲ್ಲದೇ ಆದಾಯ ತೆರಿಗೆ ಅಧಿಕಾರಿಗಳು ಯಾರ ನಿವಾಸಗಳ ಮೇಲೆ ದಾಳಿ ಮಾಡೋಲ್ಲ. ದಾಖಲೆಗಳಿರುವುದರಿಂದಲೇ ಸಚಿವ ಡಿ.ಕೆ.ಶಿವಕುಮಾರ್ ಮನೆಗಳ ಮೇಲೆ ದಾಳಿ ನಡೆದಿದೆ ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ದಾಳಿ: ಕಾಂಗ್ರೆಸ್‌ನಿಂದ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು