Select Your Language

Notifications

webdunia
webdunia
webdunia
webdunia

ಸಮಾವೇಶಕ್ಕೆ ಬಂದವರೆಲ್ಲಾ ಸುಮಲತಾ ಗೆ ವೋಟ್ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ- ಸಚಿವ ಡಿ.ಸಿ ತಮ್ಮಣ್ಣ

ಸಮಾವೇಶಕ್ಕೆ ಬಂದವರೆಲ್ಲಾ ಸುಮಲತಾ ಗೆ ವೋಟ್ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ- ಸಚಿವ ಡಿ.ಸಿ ತಮ್ಮಣ್ಣ
ಮಂಡ್ಯ , ಗುರುವಾರ, 21 ಮಾರ್ಚ್ 2019 (20:24 IST)
ಮಂಡ್ಯ : ಸುಮಲತಾ ಸಮಾವೇಶಕ್ಕೆ ಹೊರಗಿನ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿಕೆ ನೀಡಿದ್ದಾರೆ.


ಈ ಬಗ್ಗೆ ಮಾತನಾಡಿದ ಡಿ.ಸಿ ತಮ್ಮಣ್ಣ ಅವರು, ‘ಸುಮಲತಾ ಅವರ ಸಮಾವೇಶದಲ್ಲಿ ನಮ್ಮ ಅಂಬರೀಶ್ ಅವರ ಅಭಿಮಾನಿಗಳು ಹೋಗಿರುತ್ತಾರೆ. ನನಗೆ ತಿಳಿದ ಮಾಹಿತಿ ಪ್ರಕಾರ ಸುಮಲತಾ ಅವರ ಬೃಹತ್ ಸಮಾವೇಶಕ್ಕೆ ಬಂದವರ ಪೈಕಿ ಮಂಡ್ಯ ಜಿಲ್ಲೆಯವರು ಕಡಿಮೆ. ಹೆಚ್ಚಾಗಿ ಹೊರಗಿನಿಂದ ಜನ ಕರೆಸಲಾಗಿದೆ. ಮೈಸೂರು, ಚನ್ನಪಟ್ಟಣ, ರಾಮನಗರದಿಂದ ಜನ ಕರೆಸಲಾಗಿದೆ ಎನ್ನುವ ವಿಷಯ ಗೊತ್ತಾಯಿತು’ ಎಂದು ಹೇಳಿದ್ದಾರೆ.


ಸಮಾವೇಶದಲ್ಲಿ ನಮ್ಮವರು ಹಾಗೂ ಅವರ ಕಡೆಯವರು ಬಂದಿರುತ್ತಾರೆ. ಹಾಗಂತ ಅಲ್ಲಿ ಇದ್ದ ಜನರೆಲ್ಲಾ ಸುಮಲತಾ ಅವರಿಗೆ ವೋಟ್ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವ ಕಾರಣ ಕೆಲ ಕಾಂಗ್ರೆಸ್ ನಮ್ಮ ಜೊತೆ ಬರಲು ಒಪ್ಪಿದ್ದಾರೆ. ಅಲ್ಲದೆ ನಮಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

SSLC ಪರೀಕ್ಷೆಗೆ ಹಬ್ಬದ ವಾತಾವರಣ