Webdunia - Bharat's app for daily news and videos

Install App

ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕಳುಹಿಸುವುದಲ್ಲದೇ ಸಿದ್ಧ ಮಾಡುವುದು ಅತ್ಯವಶ್ಯಕ

Webdunia
ಗುರುವಾರ, 23 ಸೆಪ್ಟಂಬರ್ 2021 (21:27 IST)
ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಭಯಕ್ಕೆ ಶಾಲೆ ಅಂಗಳದಿಂದ ದೂರವಿರುವ ಮಕ್ಕಳು ಇದರ ಶಾಲೆಯ ಮುಖ ಮಾಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯೇ ಆದರೂ, ಕೆಲವು ಮಕ್ಕಳ ಮನಸ್ಸಿನ ಮೇಲೆ ಇದು ಒತ್ತಡವನ್ನು ಉಂಟುಮಾಡುತ್ತದೆ. ಕೋವಿಡ್ ಸಾಂಕ್ರಾಮಿಕದಿಂದ ಆನ್ ಲೈನ್ ಕ್ಲಾಸ್ ಗಳಿಗೆ ಹೊಂದಿಕೊಂಡ ಮಕ್ಕಳು ನೀರಿನ ವಾತಾವರಣದಿಂದ ಹೊರಗುಳಿದಿದ್ದರು. ಆನ್ ಲೈನ್ ಕ್ಲಾಸ್ ಹಾಗೂ ಮನೆಯವರೊಂದಿಗೆ ದಿನಪೂರ್ತಿಯ ಒಡನಾಟಕ್ಕೆ ಹೊಂದಿಕೊಂಡಿದ್ದರು. ಇನ್ನೂ ಶಾಲೆಗಳನ್ನು ತೆರೆಯಲಾಗಿದೆ. ಹೆಚ್ಚುವರಿಯಾಗಿ, ಕೋವಿಡ್ ಸೆಲೆ ಅಲೆ ತರಬಹುದು ಎಂಬ ಆತಂಕ ಸಹ ಮಕ್ಕಳ ಮೇಲೆ ಭಯವನ್ನು ಉಂಟುಮಾಡುತ್ತದೆ. ಈ ಸಂದರ್ಭದಲ್ಲಿ ಸುರಕ್ಷಿತವಾಗಿರುವುದನ್ನು ಅನುಸರಿಸಿ ಶಾಲೆಗೆ ಕಳುಹಿಸುವುದಲ್ಲದೇ, ಮಾನಸಿಕವಾಗಿಯೂ ಆತನನ್ನು ಸಿದ್ಧಪಡಿಸುವುದು ಅತ್ಯಗತ್ಯ ಎಂದು ನಗರದ ಫೋರ್ಟಿಸ್ ಆಸ್ಪತ್ರೆಯ ಖ್ಯಾತ ಮನೋವಿಜ್ಞಾನದ ಕೌನ್ಸಿಲಿಂಗ್ ಅಂಶಗಳನ್ನು ಕೆ. ಶಮಂತ ಈಟಿವಿ ಭಾರತಕ್ಕೆ ಹೀಗೆ   
 
ಮಕ್ಕಳ ಆತಂಕ ನಿವಾರಿಸಿ: 
 
ಪ್ರತಿನಿತ್ಯ ಸುದ್ದಿ ಮಾಧ್ಯಮಗಳನ್ನು ಮಕ್ಕಳು ಸಹ ವೀಕ್ಷಿಸಿ, ಕೋವಿಡ್ ಸಾವಿನ ಬಗ್ಗೆ ಆತಂಕಗೊಂಡಿರುತ್ತಾರೆ. ಈಗ ತಾವೂ ಸಹ ಶಾಲೆಗಳಿಗೆ ತೆರಳುವುದರಿಂದ ಕೋವಿಡ್ ಬರಬಹುದು ಎಂಬ ಭೀತಿಗೆ ಒಳಗಾಗಬಹುದು. ಇದು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿ, ಅವರ ಶಿಕ್ಷಣದ ಮೇಲೆ ಪ್ರಭಾವ ಬೀರುವುದಲ್ಲದೇ ಮಾನಸಿಕ ನೆಮ್ಮದೆ ಕಳೆದುಕೊಳ್ಳಬಹುದು.  ಹೀಗಾಗಿ ಶಾಲೆಗೆ ಕಳುಹಿಸುವ ಮುನ್ನ ಮಕ್ಕಳನ್ನು ಈ ಕೋವಿಡ್ ಎದುರಿಸುವ ಜೊತೆಗೆ, ಆತ್ಮವಿಶ್ವಾಸ ತುಂಬುದು ಅತ್ಯಂತ ಅವಶ್ಯಕ. ಮಕ್ಕಳಲ್ಲಿನ ಆತಂಕ ನಿವಾರಿಸಿ ಎಂದಿದ್ದಾರೆ.  
 
ಮೂರನೇ ಅಲೆ ಬಗ್ಗೆ ಭಯ ಬೇಡ: 
 
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಿಂದ ಜನರು ಸಾಕಷ್ಟು ಭಯಭೀತಗೊಂಡಿದ್ದರು. ಮೂರನೇ ಅಲೆ ಮಕ್ಕಳನ್ನು ಕಾಡಬಹುದು ಎಂಬ ವರದಿ ಬಳಿಕ ಇನ್ನಷ್ಟು ಹೆದರಿದ್ದರು. ಆದರೆ, ಕೆಲವು ಅಧ್ಯಯನಗಳು ಮಕ್ಕಳಿಗೆ ಹೆಚ್ಚಾಗಿ ಕೋವಿಡ್ ಬಾಧಿಸುವುದಿಲ್ಲ ಎಂದು ಹೇಳಿದೆ. ಜೊತೆಗೆ ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದ ಪ್ರಕರಣಗಳು ತೀರ ಕಡಿಮೆ ಎಂದು ಯುನೈಟೆಡ್ ಕಿಂಗ್‌ಡಮ್ ನಡೆಸಿದ ಸಂಶೋಧನೆಯಲ್ಲಿ ಸಾಬೀತಾಗಿದೆ  ಹೀಗಾಗಿ ಮೂರನೇ ಅಲೆಯೂ ಸಹ ಮಕ್ಕಳಿಗೆ ಬಾಧಿಸದೇ ಇರಬಹುದು. ಆದರೆ, ಸುರಕ್ಷತೆಯಿಂದಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಕೋವಿಡ್ ಮೂರನೆಯ ಅಲೆಯ ಸಂಭಂದ ಮನೋ ವಿಜ್ಞಾನ ವೈದ್ಯೆ  ಕೆ. ಶಮಂತ ರಿಂದ ಕೆಲವು ಟಿಪ್ಸ್: 
 
1. ಕೋವಿಡ್ ಸೋಂಕಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಹಾಗೂ ಕೋವಿಡ್ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಆಗಾಗ್ಗೇ ಸ್ಯಾನಿಟೈಸ್ ಮಾಡಿಕೊಳ್ಳುವುದರ ಬಗ್ಗೆ ಅರ್ಥವಾಗುವ ರೀತಿ ತಿಳಿ ಹೇಳಿ. ಸಣ್ಣ ಮಕ್ಕಳಾದರೆ ನೀವೇ ಹೆಚ್ಚು ಕೇರ್ ತೆಗೆದುಕೊಳ್ಳಿ. ಈ ಮಾರ್ಗಸೂಚಿಗಳನ್ನು ಅವರಿಗೆ ಹೇಳುವ ವೇಳೆ ಆತಂಕ ಪಡಿಸುವ ರೀತಿ ವಿವರಿಸಬಾರದು. ಇದು ಮಕ್ಕಳಲ್ಲಿ ಇನ್ನಷ್ಟು ಭಯ ಹುಟ್ಟು ಹಾಕಬಹುದು.
 
2. ಮಕ್ಕಳಲ್ಲಿ ಕೋವಿಡ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಇರುತ್ತವೆ. ಆ ಬಗ್ಗೆ ಯಾವುದೇ ಸಂಕೋಚವಿಲ್ಲದೇ ಅವರಿಗೆ ನಿಧಾನವಾಗಿ ತಿಳಿ ಹೇಳಿ,  ಗೊಂದಲವನ್ನು ನಿವಾರಿಸಿ. 
 
3. ಮಕ್ಕಳು ವರ್ಷಗಳ ಬಳಿಕ ಶಾಲೆಗೆ ತೆರಳುತ್ತಿರುವುದರಿಂದ ಸ್ನೇಹಿರೊಂದಿಗೆ ಹರಟೆ ಹೊಡೆಯುವುದು, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಇಚ್ಚಿಸಬಹುದು. ಇದನ್ನು ತಡೆಯುವುದು ತಪ್ಪು, ಮಕ್ಕಳ ಇಚ್ಚೆಯಂತೆ  ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ, ಆದರೆ, ಸುರಕ್ಷತೆ ಬಗ್ಗೆ ಜಾಗರೂಕತೆಯಾಗಿರಲು ಸಹ ಮನವರಿಕೆ ಮಾಡಿಕೊಡಿ.
 
4. ಮಕ್ಕಳು ಶಿಕ್ಷಣದ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಕರೆಯುವಿಕೆಯನ್ನು ಕಡಿಮೆ ಮಾಡಿ, ಮಕ್ಕಳು ಕೆಲವು ಸಮಯದ ನಂತರ ಶಾಲೆಯ ಆಫ್ಲೈನ್ ​​ಶಿಕ್ಷಣವನ್ನು ಹೊಂದಿಸಲು ಕಾಲಾವಕಾಶ ನೀಡಿ.
 
5. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ, ಶಾಲಾ ಶಿಕ್ಷಕರೊಂದಿಗೆ ಮಾತನಾಡುತ್ತಾರೆ, ಅವರಲ್ಲಿ ಇರುವ ಭಯವನ್ನು ಹೋಗಲಾಡಿಸಲು ಪ್ರಯತ್ನ ಪಡಿ. ಅಥವಾ ಮಕ್ಕಳಿಗೆ ಆಪ್ತಸಮಾಲೋಚನೆಯ ಅಗತ್ಯತೆ ಇದ್ದರೆ ಆಪ್ತಸಮಾಲೋಚನೆ ಮಾಡುವುದು ಉತ್ತಮ.
 
6. ಇನ್ನೂ ಸಣ್ಣ ಮಕ್ಕಳಿಗೆ ಶಾಲೆ ತೆರೆದಿಲ್ಲ, ಮುಂದಿನ ದಿನಗಳಲ್ಲಿ ಶಾಲೆ ತೆರೆಯುವ ಬಗ್ಗೆ ಅವರಿಗೆ ಈಗಿನಿಂದಲೇ ಅರ್ಥೈಸುತ್ತಾ ಬನ್ನಿ. ಮಕ್ಕಳಿಗೆ ಶಾಲೆ ಬಗ್ಗೆ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ವಾತಾವರಣ ನಿರ್ಮಾಣ ಮಾಡಿ.
ವೈದ್ಯರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments