Webdunia - Bharat's app for daily news and videos

Install App

ಮೋದಿ ಲೆಕ್ಕಾಚಾರದಂತೆ ಎಲ್ಲವೂ ನಡೆದು ಹೋಗ್ತಿದ್ಯಾ......?

geetha
ಗುರುವಾರ, 8 ಫೆಬ್ರವರಿ 2024 (16:13 IST)
ನವದೆಹಲಿ-ದಿನದಿಂದ ದಿನಕ್ಕೆ ಮಹಾಘಟಬಂಧನ್ ಕೋಟೆ ಬಹುತೇಕ ಹಳ್ಳ ಹಿಡಿಯುವ ಹಾಗೇ ಕಾಣ್ತಿದೆ. ಒಬ್ಬೋಬ್ಬರಾಗಿ ಇಂಡಿಯಾ ಕೂಟವನ್ನು ಬಿಟ್ಟು ಹೋಗುವ ತೀರ್ಮಾನಕ್ಕೆ ಬಂದAತಿದೆ. ನಿತೀಶ್ ಬಳಿಕ ಇದೀಗ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯೇ ಇಂಡಿಯಾ ಕೂಟದಿಂದ ಹೊರ ಹೋಗುವ ಚಿಂತನೆಯನ್ನು ಮಾಡಿದೆ ಅನ್ನುವ ಮಾತಿದೆ.ಇದೀಗ ಇಂಡಿಯಾ ಕೂಟದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗ್ತಾ ಇರೋದೇ, ಮೋದಿಯ ನೇತೃತ್ವದ ಎನ್‌ಡಿಎ ಕೂಟದ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ಅಲ್ಲಿಗೆ ಈ ಬಾರಿಯ ಡೆಲ್ಲಿ ಫೈಟ್‌ನಲ್ಲಿ ಮೋದಿಯ ಸೇನೆ ರಣವಿಕ್ರಮ ಬಾರಿಸೋದು ಬಹುತೇಕ ಅನಾಯಾಸ ಆಗಲಿದೆ ಎನ್ನಲಾಗ್ತಿದೆ.

ಇವತ್ತು ಇಡೀ ದೇಶದಲ್ಲಿ ರಾಜಕೀಯ ಪರಾಕ್ರಮವನ್ನ ಸಾಧಿಸಿದಂತೆ ಬಿಂಬಿತವಾಗ್ತಾ ಇರೋದು ಹಾಗೆ ಅವರಿಗೆ ಅವರೇ ಸಾಟಿಯಾದಂತೇ ವಿಶ್ಲೇಷಣೆ ಆಗ್ತಾ ಇರೋದು ಅದಕ್ಕೆ ತಕ್ಕಂತೆ ಅದೇ ಗತ್ತು ಗಾಂಭಿರ್ಯದಿAದ ದೇಶದ ರಾಜಕಾರಣದಲ್ಲಿ ಛಾಪು ಮೂಡಿಸುತ್ತಿರೋದು ಅದೊಂದೇ ಹೆಸರು. ಅದೇ ನಮೋ ಅರ್ಥಾತ್ ನರೇಂದ್ರ ಮೋದಿ ಭಾರತ ಕಂಡ ಜನಪ್ರಿಯ ಪ್ರಧಾನಿ ಬಟ್ ಇದೇ ಜನಪ್ರಿಯತೆ, ಹವಾ, ರಾಜ ಗಾಂಭಿರ್ಯ ರಾಜಕೀಯ ಪಟ್ಟು... ಹೀಗೆ ಎಕ್ಸೆಟ್ರಾ ಎಕ್ಸೆಟ್ರಾ... ಅಂತ ಮಿರ ಮಿರ ಮಿಂಚಾ ಇರೋ ವ್ಯಕ್ತಿತ್ವ.
 
ಬಹುಶಃ ಇಷ್ಟೆಲ್ಲಾ ಇರೋ ಕಾರಣಕ್ಕೆ ಮೋದಿ ಎಂಬ ಪ್ರಚಂಡ ಶಕ್ತಿಯನ್ನ ಸೋಲಿಸೋದಕ್ಕೆ ತೃತೀಯ ರಂಗ, ಅರ್ಥಾತ್ ಘಟಬಂಧನ್ ಹೀಗೆ ಸಾಕಷ್ಟು ರಣತಂತ್ರಗಳು ರಾಷ್ಟçದ ರಾಜಕಾರಣದಲ್ಲಿ ಆಗ್ತಾ ಬಂದಿವೆ. ಆದರೂ ಎರಡು ಅವಧಿಗೆ ಮೋದಿಯೇ ದೇಶದ ಚುಕ್ಕಾಣಿಯನ್ನ ಹಿಡಿದು, ಶಕ್ತಿ ಕೇಂದ್ರದಲ್ಲಿ ರಾಜದರ್ಬಾರ್ ಆಡಳಿತವನ್ನು ನಡೆಸುತ್ತಾ ಬಂದಿದ್ದಾರೆ.ಮೋದಿ ಎಂಬ ಅಶ್ವಮೇಧಯಾಗ ಕುದುರೆಯನ್ನ ಅಷ್ಟು ಸುಲಭವಾಗಿ ಸೋಲಿಸೋದಕ್ಕೆ ಸಾಧ್ಯವಿಲ್ಲ... ಅದು ವಿರೋಧಪಕ್ಷಗಳಿಗೂ ಅರ್ಥವಾಗಿರುವ ಸಂಗತಿ ಆದರೂ ಸದ್ದಿಲ್ಲದೇ ನಿರಂತರವಾಗಿ ಪ್ರಯತ್ನಗಳು ನಡೆದಿವೆ. ಆದರೂ ಕಾಂಗ್ರೆಸ್‌ಗೆ ಇದೀಗ ಒಂದೊAದೇ ಪಾರ್ಟಿ ಕೈ ಕೊಡ್ತಿರೋದು ಮೋದಿಯ ಸೇನೆಯ ಬಲವನ್ನು ಇನ್ನಷ್ಟು ಹಿಗ್ಗಿಸುತ್ತಿದೆ.

ಒಂದು ಗಮನಿಸಿ ನೋಡಿ ಇಲ್ಲಿ ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರವನ್ನು ಹಿಡಿದಿದೆ ಹಾಗೇ ಮತ್ತೇ ೨೦೨೪ರ ಈ ಬಾರಿಯ ಲೋಕ ಸಮರವೂ ಎದುರಾಗ್ತಿದೆ ಮತ್ತೆ ಮೋದಿಯ ನಾಯಕತ್ವದಲ್ಲೇ ಬಿಜೆಪಿ ಚುನಾವಣೆಯನ್ನ ಗೆಲ್ಲೋ ತಾಲೀಮ ನಡೆಸಿದೆ... ಹಾಗೇ ಬಿಜೆಪಿಗೇ ಅಷ್ಟೇ ಹೋಪ್ ಕೂಡ ಇದೆ ಈ ಭಾರಿಯೂ ನಮ್ಮದೇ ಗೆಲುವು ಅಂತ ಬಿಜೆಪಿಗೆ ನಂಬಿಕೆ ಇರೋದು, ಪಕ್ಷದ ಸಂಘಟನೆಯ ಮೇಲೆನೋ, ಅಥವಾ ಇನ್ಯಾವುದೋ ಸಿದ್ಥಾಂತದ ಮೇಲಲ್ಲ ಬದಲಾಗಿ ಮೋದಿ ಎಂಬ ದೈತ್ಯ ಅಲೆಯ ಶಕ್ತಿಯ ಮೇಲೆ ಇಲ್ಲಿ ಬಿಜೆಪಿಯೇತರ ಸರ್ಕಾರ ದೇಶದಲ್ಲಿ ಪ್ರತಿಷ್ಠಾಪನೆ  ಅಗಬೇಕಾದರೇ ಮೊದಲು ಬಿಜೆಪಿಯನ್ನ ಸೋಲಿಸಬೇಕು ಅಂತ ಲೆಕ್ಕಾಚಾರ ಹಾಕಿಕೊಂಡ್ರೆ ಅದು ಶುದ್ದ ಸುಳ್ಳು.

ಯಾಕಂದ್ರೆ ಬಿಜೆಪಿಯನ್ನ ಹೊರತಾದ ಪರ್ಯಾಯ ಸರ್ಕಾರ ದೆಲ್ಲಿಯಲ್ಲಿ ದರ್ಬಾರ್ ನಡೆಸಬೇಕಾದರೆ ಬಿಜೆಪಿಯನ್ನ ಮಕಾಡೆ ಮಲಗಿಸೋದಲ್ಲ. ಅದಕ್ಕೂ ಮೊದಲು ಮೋದಿಯನ್ನ ಸೋಲಿಸಬೇಕು, ನಮೋವಿನ ಅಲೆಯನ್ನ ತಗ್ಗಿಸುವ ಕೆಲಸವಾಗಬೇಕು.... ಅದಾದರೇ ಮಾತ್ರ ಘಟಬಂಧನ್ ತಂತ್ರಗಾರಿಕೆಗೆ ಒಂದಾರ್ಥ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments