Webdunia - Bharat's app for daily news and videos

Install App

3 ಕೋಟಿ ಉಂಡೆ ನಾಮ ಹಾಕಿದ್ದ ವಂಚಕನನ್ನು ರೌಂಡ್ ಅಪ್ ಮಾಡಿದ ಹೂಡಿಕೆದಾರರು:ಸಿಐಡಿ ಪೊಲೀಸರಿಂದ ಗ್ರಿಲ್

Webdunia
ಶನಿವಾರ, 11 ಸೆಪ್ಟಂಬರ್ 2021 (20:26 IST)
ಬೆಂಗಳೂರು: ಆರ್.ಸಿ  ಹಾಗೂ ಇತರ ದಾಖಲೆಗಳನ್ನು ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಸಿದ್ಧಪಡಿಸುವ ಟೆಂಡರ್ ಮೂಲಕ ಉಂಡೆ ನಾಮ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ವಂಚನೆಗೊಳಗಾದವರೇ ರೌಂಡ್ ಅಪ್ ಮಾಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
 
 
ವಿವೇಕ್ ನಾಗಪಾಲ್ ಬಂಧಿತ ಆರೋಪಿಯಾಗಿದ್ದಾನೆ. ಈ ಹಿಂದೆ ರೋಸ್ ಮರ್ಟಾ ಟೆಕ್ನಾಲಜೀಸ್ ಹೆಸರಿನ ಕಂಪೆನಿಯಿಂದ  ಡಿ.ಎಲ್, ಆರ್.ಸಿ ದಾಖಲೆಗಳನ್ನು ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಸಿದ್ಧಪಡಿಸುವ ಟೆಂಡರ್ ಪಡೆದಿತ್ತು.ಈ ಮೂಲಕ ವಿವಿಧ ಪ್ರಾಜೆಕ್ಟ್ ಕೊಡುವುದಾಗಿ ನಂಬಿಸಿ, ಪ್ರಮುಖ ಆರೋಪಿ ವಿವೇಕ್ ನಾಗಪಾಲ್ 2016 ರಲ್ಲಿ ಸಾಕಷ್ಟು ಹೂಡಿಕೆದಾರರಿಂದ ಸುಮಾರು 13 ಕೋಟಿ ಹಣ ಪಡೆದಿರುವ ಆರೋಪ ಕೇಳಿ ಬಂದಿತ್ತು. ನಂತರ  ಪ್ರಾಜೆಕ್ಟ್ ಯಾವುದೇ ಪ್ರಾಜೆಕ್ಟ್ ನೀಡಿಲ್ಲ. ಕೊಟ್ಟ ಹಣ ಕೂಡ  ವಾಪಸ್ ನೀಡದೇ ಇದ್ದಾಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. 
 
ಪೊಲೀಸರಿಂದ ಗ್ರಿಲ್: 
 
ಬಹುಕೋಟಿ ವಂಚನೆ ಆರೋಪದಡಿ ಈ ಪ್ರಕರಣ  ಸಿಐಡಿಗೆ ವರ್ಗಾವಣೆಯಾಗಿತ್ತು. ನಂತರ ಆರೋಪಿ ವಿವೇಕ್ ನಾಗಪಾಲ್ ಪೊಲೀಸರಿಗೆ ಸಿಗದೇ ಎಸ್ಕೇಪ್ ಆಗಿದ್ದ. ಪ್ರಕರಣದ  ಕುರಿತು ವಂಚನೆಗೊಳಗಾದವರನ್ನು ಸಿಐಡಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಈ ನಡುವೆ  ವಂಚನೆಗೊಳಗಾದ ಹೂಡಿಕೆದಾರರು ಗುರುವಾರ  ಖಾಸಗಿ ಫೈವ್ ಸ್ಟಾರ್ ಹೊಟೇಲ್‍ನಲ್ಲಿ ವಿವೇಕ್ ನಾಗಪಾಲ್ ನನ್ನು ನೋಡಿ ಸಿಐಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಂಚನೆ ಪ್ರಕರಣ ಸಂಬಂಧ ಆರೋಪಿ ನಾಗಪಾಲ್ ಜತೆಗೆ ಮಾತಿನ ಚಕಮಕಿ ಕೂಡ ನೆಡೆದಿದೆ. ನಂತರ ಹೈಗ್ರೌಂಡ್ಸ್ ಪೊಲೀಸರಿಗೆ ವಂಚನೆಗೊಳಗಾದವರೇ ವಿವೇಕ್ ನಾಗಪಾಲ್ ನನ್ನು ಹಿಡಿದು ಇದೀಗ ಒಪ್ಪಿಸಿದ್ದಾರೆ. ಸದ್ಯ ಸಿಐಡಿ ಇನ್ಸ್ ಪೆಕ್ಟರ್ ಪ್ರವೀಣ್ ಎಲೆಗಾರ್ ಹೈಗ್ರೌಂಡ್ಸ್ ಠಾಣೆಗೆ ಭೇಟಿ ನೀಡಿ  ವಿವೇಕ್ ನಾಗಪಾಲ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
k

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

ಮುಂದಿನ ಸುದ್ದಿ
Show comments