Webdunia - Bharat's app for daily news and videos

Install App

ರೈತರ ಸಾಲ ಮನ್ನಾ: ಮಧ್ಯವರ್ತಿ ಬ್ಯಾಂಕ್ ಗೆ ಬೆಳೆ ಸಾಲದ ಹಣ ಕೊಡಲು ಒತ್ತಾಯ

Webdunia
ಗುರುವಾರ, 6 ಸೆಪ್ಟಂಬರ್ 2018 (14:27 IST)
ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಸಾಲಮನ್ನಾ ಯೋಜನೆಯಡಿ ಪ್ರಾಥಮಿಕ ಸಹಕಾರಿ ಸಂಘ ಗಳಿಗೆ ಅನ್ವಯವಾಗುವ ಸಾಲಮನ್ನಾ ಯೋಜನೆ ಜನರಿಗೆ ದಕ್ಕುತ್ತಿಲ್ಲ. ರೈತರಿಗೆ ಬಡ್ಡಿರಹಿತ ಸಾಲ ನೀಡುತ್ತಿದ್ದು, ಬಡ್ಡಿಯನ್ನು ರಾಜ್ಯಸರ್ಕಾರ ಭರಿಸುತ್ತಿದೆ. ಆದ್ರೆ ಈ ಬಡ್ಡಿಯ ಹಣ ಸಂಘಗಳಿಗೆ ಸರಿಯಾದ ಸಮಯದಲ್ಲಿ ಸಂದಾಯವಾಗುತ್ತಿಲ್ಲ ಎಂದು ಸಹಕಾರಿ ಸಂಘಗಳ ಒಕ್ಕೂಟ ಆರೋಪಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ತಾಲೂಕು ಪಂಚಾಯತ್ ಸಭಾಂಗಣಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಒಕ್ಕೂಟ, ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಗೆ 297 ಕೋಟಿ ಬರಬೇಕಿದ್ದು,15 ತಿಂಗಳ ಅವಧಿಯಲ್ಲಿ 212 ಕೋಟಿ ಜಮೆಯಾಗಿದೆ. ಆದ್ರೆ ಸರ್ಕಾರದಿಂದ ಇನ್ನೂ 85 ಕೋಟಿ ಬರಬೇಕಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.  ಆದಷ್ಟು ಬೇಗ 85 ಕೋಟಿ ಬೆಳೆ ಸಾಲದ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕೆಂಬ ಆಗ್ರಹ ಮಾಡಿತು. ಸಂಪೂರ್ಣ ಸಾಲಮನ್ನಾ ಆದಂತ ರೈತರಿಗೆ ಈಗ ಹೊಸ ಸಾಲ ಸಿಗುತ್ತಿಲ್ಲ. ಕರಾವಳಿಯ ಎಲ್ಲಾ ತಾಲೂಕು ಗಳೂ ಭತ್ತ ಪ್ರಧಾನ ಸಹಕಾರಿ ಸಂಘಗಳಾಗಿದ್ದರಿಂದ ಸಾಲಮನ್ನಾ ಅನ್ವಯವಾಗಿದೆ. ಮಲೆನಾಡಿನ ಹಲವಾರು ಸಂಘಗಳು ಅಡಿಕೆ ಪ್ರಧಾನ ಸಂಘಗಳಾಗಿದ್ದು ಅವುಗಳಿಗೆ ಬರಬೇಕಾದ ಸಾಲಮನ್ನಾ ಯೋಜನೆ ಇನ್ನೂ ಅನ್ವಯವಾಗಿಲ್ಲ. ಈಗಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಸಾಲಮನ್ನಾ ಅದೇಶವು ಸಂಪೂರ್ಣ ಗೊಂದಲಮಯ ವಾಗಿದ್ದು, ವಾರಕ್ಕೊಂದು ಸುತ್ತೋಲೆಗಳು ಬರುತ್ತಿವೆ. 70 ರಿಂದ 80 % ರೈತರಿಗೆ ಈ ಸಲದ ಸಾಲಮನ್ನಾ ಯೋಜನೆ ಸಿಗೋ ದಿಲ್ಲ. ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಮುರಿದು ಸಾಲಮನ್ನಾ ಮಾಡಿ ಅನ್ನೋ ಘೋಷಣೆಯಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಈ ಮಾನದಂಡ ವನ್ನು ಸರಳೀಕರಣಗೊಳಿಸ
ಬೇಕು. ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಕಡ್ಡಾಯವಾಗಿದ್ದು, 2195 ರೂಪಾಯಿ ಒಂದು ಎಕರೆಗೆ ಪ್ರೀಮಿಯಂ ತುಂಬುತ್ತಿದ್ದು, ಈ ವಿಮೆ ಜುಲೈ 7 ರಿಂದ ಆಗಸ್ಟ್ 31 ರ ಅವಧಿಗೆ ಮಾತ್ರ ಅನ್ವಯವಾಗುತ್ತಿದೆ.

ಆದ್ರೆ ಆ ಪ್ರದೇಶದ ವ್ಯಾಪ್ತಿಯಲ್ಲಿ 7 ದಿನ ನಿರಂತರ ಮಳೆಯಾದ್ರೆ ಮಾತ್ರ ಈ ವಿಮೆ ಸಿಗುತ್ತಿದ್ದು, ಎಲ್ಲ ರೈತರಿಗೂ ವಿಮೆ ಸಿಗುತ್ತಿಲ್ಲ.   ಪ್ರೀಮಿಯಂ ತುಂಬಿದ ನಂತರದ ವಿಧಾನಗಳ ಬಗ್ಗೆ ಯಾರೂ ಕೂಡ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದೊಂದು ವಿಮಾ ಕಂಪನಿಗಳಿಗೆ ಹೊಟ್ಟೆ ತುಂಬಿಸುವ ಮೋಸದ ಜಾಲವಾಗಿದ್ದು, ಕೂಡಲೇ ಎಲ್ಲ ರೈತರಿಗೂ ಇದರ ಪ್ರಯೋಜನ ಸಿಗುವಂತೆ ಮಾಡಬೇಕು ಎಂದು ಅಗ್ರಹಿಸಿತು.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments