Select Your Language

Notifications

webdunia
webdunia
webdunia
webdunia

ಯಡ್ಡಿ ಬೆಂಬಲಿಗರಿಂದ ಪದ್ಮನಾಭ ಪ್ರಸನ್ನ ಮುಖಕ್ಕೆ ಮಸಿ

ಯಡ್ಡಿ ಬೆಂಬಲಿಗರಿಂದ ಪದ್ಮನಾಭ ಪ್ರಸನ್ನ ಮುಖಕ್ಕೆ ಮಸಿ
ಬೆಂಗಳೂರು , ಶುಕ್ರವಾರ, 28 ಅಕ್ಟೋಬರ್ 2016 (14:28 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೆಂಬಲಿತ ಗೂಂಡಾಗಳು ನನ್ನ ಮುಖಕ್ಕೆ ಮಸಿ ಎರಚಿದ್ದಾರೆ ಎಂದು ಕೆಜೆಪಿ ಅಧ್ಯಕ್ಷ ಪದ್ಮನಾಭ ಪ್ರಸನ್ನ ಆರೋಪಿಸಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಮದುವೆಯಾಗಿದ್ದಾರೆ. ಈ ಕುರಿತು ಮಾತನಾಡಲು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಕರೆದಿದ್ದೆ. ಆ ಸಂದಂರ್ಭದಲ್ಲಿ ಪ್ರೆಸ್‌ಕ್ಲಬ್‌ಗೆ ಆಗಮಿಸಿದ ಬಿಎಸ್‌ವೈ ಬೆಂಬಲಿತ ಗೂಂಡಾಗಳು ನನ್ನ ಮುಖಕ್ಕೆ ಮಸಿ ಬಳೆದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
 
ಬಿಎಸ್‌ವೈ ಹಾಗೂ ಶೋಭಾ ಕರಂದ್ಲಾಜೆ ಮದುವೆಯಾಗಿರುವ ವಿಷಯವನ್ನು ರಾಜ್ಯದ ಜನತೆ ಮುಂದೆ ಬಹಿರಂಗ ಪಡೆಸುತ್ತೇನೆ ಎಂದು ಯಡಿಯೂರಪ್ಪ ಬೆಂಬಲಿತ ಗೊಂಡಾಗಳು ಎಂಜಿನ್ ಆಯಿಲ್‌ನ್ನು ನನ್ನ ಮುಖಕ್ಕೆ ಎರಚಿದ್ದಾರೆ ಎಂದು ಕೆಜೆಪಿ ಅಧ್ಯಕ್ಷ ಪದ್ಮನಾಭ ಪ್ರಸನ್ನ ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪರಾರಿಯಾದ ಪತ್ನಿ: ಆಕೆ ಎಷ್ಟು ಮದುವೆಯಾದರೂ ಸರಿ ನನಗವಳೇ ಬೇಕು ಎನ್ನುತ್ತಿದ್ದಾನೆ ಈತ