Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಹೆಸರಲ್ಲಿ ಕ್ಯಾಂಟಿನ್, 5 ರೂಪಾಯಿಗೆ ಊಟ

ಯಡಿಯೂರಪ್ಪ ಹೆಸರಲ್ಲಿ ಕ್ಯಾಂಟಿನ್, 5 ರೂಪಾಯಿಗೆ ಊಟ
ಮಂಡ್ಯ , ಶನಿವಾರ, 30 ಡಿಸೆಂಬರ್ 2017 (19:29 IST)
ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಂಘ ಜಿಲ್ಲಾ ಘಟಕದ ವತಿಯಿಂದ ಸುಭಾಷ್‌ ನಗರದಲ್ಲಿ ಯಡಿಯೂರಪ್ಪಜೀ ಕ್ಯಾಂಟೀನ್ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಅಧ್ಯಕ್ಷ ಜಿ.ಎಸ್.ಜಿತೇಂದ್ರ ಘೋಷಿಸಿದ್ದಾರೆ.
 
ಬಡವರಿಗೆ, ರೈತರು, ಆಟೊ ಚಾಲಕರು ಹಾಗೂ ಕಾರ್ಮಿಕರಿಗೆ ಅನುಕೂಲವಾಗಲು 5 ರೂಪಾಯಿಗೆ ಉಪಹಾರ ಹಾಗೂ ಊಟ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 
 
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಮಾಹಿತಿ ನೀಡಿದ ಅವರು, ಹಸಿವು ನೀಗಿಸುವ ಉದ್ದೇಶದಿಂದ ಯಡಿಯೂರಪ್ಪ ಹೆಸರಿನಲ್ಲಿ ಕ್ಯಾಂಟೀನ್‌ ತೆರೆಯಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
 
ಅಗ್ಗದ ದರದಲ್ಲಿ ಕ್ಯಾಂಟಿನ್ ಆರಂಭಿಸುವ ಸರದಿ ಈಗ ಬಿಜೆಪಿಗೆ ಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಮಾಜವಾದಿ ಪಕ್ಷತ ನೀತಿಗೆ ವಿರುದ್ಧವಾಗಿ ತಲಾಕ್ ವಿಧೇಯಕ ಬೆಂಬಲಿಸಿದ ಅಪರ್ಣಾಯಾದವ್