Select Your Language

Notifications

webdunia
webdunia
webdunia
webdunia

ಐಟಿ ದಾಳಿಯಲ್ಲಿ ದೊರೆತಿದ್ದು ಕೇವಲ 41 ಸಾವಿರ ರೂ: ಜಾರಕಿಹೊಳಿ ಸ್ಪಷ್ಟನೆ

ಐಟಿ ದಾಳಿಯಲ್ಲಿ ದೊರೆತಿದ್ದು ಕೇವಲ 41 ಸಾವಿರ ರೂ: ಜಾರಕಿಹೊಳಿ ಸ್ಪಷ್ಟನೆ
ಬೆಳಗಾವಿ , ಗುರುವಾರ, 26 ಜನವರಿ 2017 (17:55 IST)
ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ನೂರಾರು ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ ಎನ್ನುವ ವರದಿಗಳು ಆಧಾರರಹಿತ. ನನ್ನ ಮನೆಯಲ್ಲಿ ಕೇವಲ 41 ಸಾವಿರ ರೂಪಾಯಿಗಳು ದೊರೆತಿವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
 
ಐಟಿ ಅಧಿಕಾರಿಗಳು ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ದಾಳಿ ನಡೆಸಿ 162 ಕೋಟಿ ರು. ಆಸ್ತಿ, 41 ಲಕ್ಷ ರು ನಗದು ಹಾಗೂ 12 ಕೆಜಿ ಚಿನ್ನಾಭರಣ ಪತ್ತೆ ಹಚ್ಚಿದ್ದಾರೆ. ಹೀಗಾಗಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿದ್ದವು. 
 
ನನ್ನ ಮನೆಯಲ್ಲಿ ಸಿಕ್ಕಿದ್ದು 41 ಲಕ್ಷವಲ್ಲ 41 ಸಾವಿರ ರು. ಹಣ ಎಂದು ಸ್ಪಷ್ಟನೆ ನೀಡಿರುವ ಅವರು ನನ್ನ ಆಸ್ತಿಪಾಸ್ತಿಗಳ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಬಯಸಿದರೇ ನಾನು ಸಚಿವ ಸ್ಥಾನ ತ್ಯಜಿಸುವುದಾಗಿ ಹೇಳಿರುವ ಜಾರಕಿಹೊಳಿ, ಸಿದ್ದರಾಮಯ್ಯ ನನ್ನ ರಾಜೀನಾಮೆ ಕೇಳುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಗೇಡ್ ಹುಟ್ಟುವ ಮೊದಲೇ ಕೆಲವರಿಗೆ ನಡುಕ ಆರಂಭ: ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಲೇವಡಿ