Select Your Language

Notifications

webdunia
webdunia
webdunia
webdunia

ಬರ ನಿರ್ವಹಣೆ ಕಾಮಗಾರಿಯಲ್ಲಿ ರಾಜಕೀಯ ಬೇಡ: ಕೆ.ಎಸ್.ಈಶ್ವರಪ್ಪ

ಬರ ನಿರ್ವಹಣೆ ಕಾಮಗಾರಿಯಲ್ಲಿ ರಾಜಕೀಯ ಬೇಡ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ , ಶುಕ್ರವಾರ, 29 ಏಪ್ರಿಲ್ 2016 (13:40 IST)
ಬರ ನಿರ್ವಹಣೆ ಕಾರ್ಯದಲ್ಲಿ ಎಲ್ಲರು ಒಂದಾಗಿ ಕೆಲಸ ಮಾಡೋಣ. ಬರ ನಿರ್ವಹಣೆಯಲ್ಲಿ ರಾಜಕೀಯ ಬೇಡ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
 
ಸಮರೋಪಾದಿಯಲ್ಲಿ ಬರಪರಿಹಾರ ಕೆಲಸ ನಡೆಯಬೇಕು. ಯಾವುದೇ ಕಾರಣಕ್ಕೂ ಜನರು ತೊಂದರೆ ಎದುರಿಸುವಂತಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಸಿಎಂ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ಶಾಸಕರ ನಿಧಿಯಿಂದ 600 ಕೋಟಿಗಳಷ್ಟು ಹಣವಿದೆ. ಕೇಂದ್ರ ಸರಕಾರ 2273 ಕೋಟಿ ರೂಪಾಯಿಗಳನ್ನು ನೀಡಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ 990 ಕೋಟಿ ಹಣವಿದೆ. ಎಲ್ಲಾ ಹಣವನ್ನು ಕ್ರೂಢೀಕರಿಸಿ ಬರಪರಿಹಾರ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.
 
ಬರನಿರ್ವಹಣೆ ಉಸ್ತುವಾರಿಗೆ ಸಮಿತಿ ರಚನೆ ಸಮಿತಿಯಲ್ಲಿ ಸಂಸದರು ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಬೇಕು ಎಂದು ಈಶ್ವರಪ್ಪ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

Share this Story:

Follow Webdunia kannada

ಮುಂದಿನ ಸುದ್ದಿ

ಸುಬ್ರಮಣಿಯನ್ ಸ್ವಾಮಿ ಬಿಜೆಪಿ ಉಡುಗೊರೆ ಎಂದ ಆಜಾದ್