Select Your Language

Notifications

webdunia
webdunia
webdunia
webdunia

ಕೃಷ್ಣಮಠದಲ್ಲಿ ಇಫ್ತಾರ್‌ಕೂಟ: ಜುಲೈ 2 ರಂದು ಶ್ರೀರಾಮಸೇನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ

ಕೃಷ್ಣಮಠದಲ್ಲಿ ಇಫ್ತಾರ್‌ಕೂಟ: ಜುಲೈ 2 ರಂದು ಶ್ರೀರಾಮಸೇನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ
ಉಡುಪಿ , ಸೋಮವಾರ, 26 ಜೂನ್ 2017 (17:04 IST)
ಶ್ರೀಕೃಷ್ಣಮಠದಲ್ಲಿ ಇಫ್ತಾರ್‌ಕೂಟ ಆಯೋಜಿಸಿರುವುದನ್ನು ವಿರೋಧಿಸಿ ಜುಲೈ 2 ರಂದು ಶ್ರೀರಾಮಸೇನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ಸಂಸ್ಥಾಪಕ ಪ್ರಮೋದ್ ಮುಚಾಲಿಕ್ ಹೇಳಿದ್ದಾರೆ.
 
ಶ್ರೀಕೃಷ್ಣ ಮಠದಲ್ಲಿ ಮುಸ್ಲಿಂ ಸಮುದಾಯಕ್ಕೆ ಇಫ್ತಾರ್ ಕೂಟ ಆಯೋಜಿಸಿ ಸ್ವಾಮಿಜಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ. ಗೋಮಾಂಸ ಭಕ್ಷಕರಿಗೆ ಮಠದಲ್ಲಿ ನಮಾಜ ಮಾಡಲು ಅವಕಾಶ ನೀಡಿರುವುದು ಸಹ್ಯವಲ್ಲ ಎಂದು ಕಿಡಿಕಾರಿದ್ದಾರೆ.
 
ಸ್ವಾಮಿಜಿಗಳಿಂದ ಇಡೀ ಹಿಂದು ಸಮುದಾಯಕ್ಕೆ ಅಪಮಾನವಾಗಿದೆ. ಸ್ವಾಮಿಜಿಗಳ ಕೃತ್ಯ ವಿರೋಧಿಸಿ ಹಿಂದು ಪರ ಸಂಘಟನೆಗಳು ಜುಲೈ 2 ರಂದು ರಾಜ್ಯದಾದ್ಯಂತ ಭಾರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿವೆ ಎಂದು ತಿಳಿಸಿದ್ದಾರೆ.
 
ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಬಗ್ಗೆ ತಿಳಿದುಕೊಂಡಿದ್ದೇನೆ. ಹಿಂದು ಧರ್ಮ ಏನು ಎನ್ನುವುದು ಮುತಾಲಿಕ್‌ಗಿಂತ ನನಗೆ ಚೆನ್ನಾಗಿ ಗೊತ್ತಿದೆ ಎಂದು ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದಾರೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೊಮ್ಮಗನಿಂದಲೇ ಅಜ್ಜಿ ಮೇಲೆ ಅತ್ಯಾಚಾರ