Select Your Language

Notifications

webdunia
webdunia
webdunia
webdunia

ಮೊದ್ಲು ನೀವು ಶಾಸಕರಾಗಿ ಆಯ್ಕೆಯಾಗ್ತೀರಾ ನೋಡಿ? : ಸಿಎಂಗೆ ಕುಮಾರಸ್ವಾಮಿ ಸವಾಲ್

ಮೊದ್ಲು ನೀವು ಶಾಸಕರಾಗಿ ಆಯ್ಕೆಯಾಗ್ತೀರಾ ನೋಡಿ? : ಸಿಎಂಗೆ ಕುಮಾರಸ್ವಾಮಿ ಸವಾಲ್
ಬೆಂಗಳೂರು , ಶುಕ್ರವಾರ, 14 ಜುಲೈ 2017 (13:15 IST)
ಯಡಿಯೂರಪ್ಪ, ಕುಮಾರಸ್ವಾಮಿ ಅವರಪ್ಪನಾಣೆಗೂ ಮತ್ತೊಮ್ಮೆ ಮುಖ್ಯಮಂತ್ರಿ ಆಗಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮೊದ್ಲು ನೀವು ಶಾಸಕರಾಗಿ ಆಯ್ಕೆಯಾಗ್ತೀರಾ ನೋಡಿ ಎಂದು ಸವಾಲ್ ಹಾಕಿದ್ದಾರೆ.
 
ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ಭ್ರಮೆಯಲ್ಲಿ ತೇಲಾಡಬೇಡಿ ನೀವಿಬ್ಬರು ನಮ್ಮಪ್ಪನಾಣೆಗೂ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
 
ಪರಪ್ಪನ ಅಗ್ರಹಾರದ ಡಿಐಜಿ ರೂಪಾ ಮೌಡ್ಗಿಲ್ ಮತ್ತು ಡಿಜಿ ಸತ್ಯನಾರಾಯಣ ಜಟಾಪಟಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಇಷ್ಟು ವರ್ಷ ಸೇವೆ ಸಲ್ಲಿಸಿದ್ದಾರೆ. ಸರಕಾರಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ತಪ್ಪು ಎಂದು ಗೊತ್ತಿಲ್ಲವೇ? ಎಂದು ಕಿಡಿಕಾರಿದ್ದಾರೆ.
 
ಸರಕಾರಕ್ಕೆ ಮಾನ ಮರ್ಯಾದೆ ಇದ್ರೆ ಇಬ್ಬರು ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಿ ತನಿಖೆ ನಡೆಸಬೇಕು. ತನಿಖಾ ವರದಿ ಬಂದ ನಂತರ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದರು.
 
ಎರಡು ರಾಷ್ಟ್ರೀಯ ಪಕ್ಷಗಳ ಬಯಲಾಟ ನೋಡುತ್ತಿದ್ದೇವೆ. ಯಾರೊಬ್ಬರು ತಮ್ಮ ಸ್ಥಾನ, ಘನತೆ, ಗೌರವಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಮಿಸ್ ಮಾಡಿಕೊಳ್ಳುವಂತಹದ್ದು ಏನೂ ಇಲ್ಲ: ವಿಜಯ್ ಮಲ್ಯ ದರ್ಪದ ಹೇಳಿಕೆ