Select Your Language

Notifications

webdunia
webdunia
webdunia
webdunia

ನಿಮಗೆ ಶಕ್ತಿ ಇದ್ರೆ ಕೇಂದ್ರದಿಂದ ಸಾಲ ಮನ್ನಾ ಮಾಡಿಸಿ: ಬಿಎಸ್‌ವೈಗೆ ವೇಣುಗೋಪಾಲ್ ಸವಾಲ್

ನಿಮಗೆ ಶಕ್ತಿ ಇದ್ರೆ ಕೇಂದ್ರದಿಂದ ಸಾಲ ಮನ್ನಾ ಮಾಡಿಸಿ: ಬಿಎಸ್‌ವೈಗೆ ವೇಣುಗೋಪಾಲ್ ಸವಾಲ್
ಬೆಂಗಳೂರು , ಶುಕ್ರವಾರ, 30 ಜೂನ್ 2017 (15:27 IST)
ದಲಿತರ ಮನೆಗೆ ಉಪಹಾರಕ್ಕಾಗಿ ಹೋಗುತ್ತಿದ್ದೀರಿ. ಅಧಿಕಾರದಲ್ಲಿದ್ದಾಗ ಏಕೆ ದಲಿತರ ಮನೆಗೆ ಹೋಗಲಿಲ್ಲ.  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಗರಂ ಆಗಿದ್ದಾರೆ. 
 
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಆಯೋಜಿಸಲಾದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಎಸ್‌ವೈ ಅವರೇ  ನಿಮಗೆ ಶಕ್ತಿ ಇದ್ರೆ ಕೇಂದ್ರದ ಬಳಿ ಸಾಲ ಮನ್ನಾ ಮಾಡಿಸಿ ಎಂದು ಗುಡುಗಿದ್ದಾರೆ.
 
ಕೇವಲ ರಾಜಕೀಯ ಉದ್ದೇಶಕ್ಕಾಗಿ ದಲಿತರ ಮನೆಗೆ ಭೇಟಿ ನೀಡುತ್ತಿದ್ದೀರಿ. ಚುನಾವಣೆಯಲ್ಲಿ ದಲಿತರ ಮತ ಪಡೆಯಬೇಕು ಎನ್ನುವ ಏಕೈಕ ಉದ್ದೇಶದಿಂದ ದಲಿತರನ್ನು ಓಲೈಕೆಯಲ್ಲಿ ಬಿಜೆಪಿ ತೊಡಗಿದೆ ಎಂದು ಆರೋಪಿಸಿದ್ದಾರೆ. 
 
ನಿಮಗೆ ಶಕ್ತಿ ಇದ್ದರೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಿಸಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸವಾಲ್ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವರನ ನಾಗಿನ್ ಡ್ಯಾನ್ಸ್ ಕಂಡು ಮದುವೆನೇ ಬೇಡ ಅಂದ ವಧು