Select Your Language

Notifications

webdunia
webdunia
webdunia
webdunia

ಬೊಮ್ಮಯಿ ಅಂದ್ರೆ ಪೇ ಸಿಎಂ ಎಂದು ಸಣ್ಣ ಮಕ್ಕಳನ್ನು ಕೇಳಿದ್ರೆ ಹೇಳ್ತಾರೆ : ಸುರ್ಜೇವಾಲಾ

ಬೊಮ್ಮಯಿ ಅಂದ್ರೆ ಪೇ ಸಿಎಂ ಎಂದು ಸಣ್ಣ ಮಕ್ಕಳನ್ನು ಕೇಳಿದ್ರೆ ಹೇಳ್ತಾರೆ : ಸುರ್ಜೇವಾಲಾ
ದಾವಣಗೆರೆ , ಮಂಗಳವಾರ, 7 ಮಾರ್ಚ್ 2023 (07:01 IST)
ದಾವಣಗೆರೆ : ರಾಜ್ಯ ಬಿಜೆಪಿ ನಾಯಕರು ಮಠದ ಅನುದಾನದಲ್ಲಿ, ಗುತ್ತಿಗೆದಾರರ ಬಳಿ ಸೇರಿದಂತೆ ಎಲ್ಲದರಲ್ಲೂ 40% ಕಮಿಷನ್ ಹೊಡೆಯುತ್ತಿದ್ದಾರೆ.
 
ಮುಂದಿನ ದಿನಗಳಲ್ಲಿ ಇವರು ಸಿಎಂ ಸ್ಥಾನವನ್ನು ಮಾರಾಟ ಮಾಡ್ತಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ  ರಣದೀಪ್ ಸಿಂಗ್ ಸುರ್ಜೇವಾಲಾ ವಾಗ್ದಾಳಿ ನಡೆಸಿದರು.

ದಾವಣಗೆರೆಯ ಎಂಬಿಎ ಕಾಲೇಜಿನ ಆವರಣದಲ್ಲಿ ನಡೆದ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದ ಅವರು, 40% ಸರ್ಕಾರ ಎಂದರೆ ಅದು ರಾಜ್ಯ ಬಿಜೆಪಿ ಸರ್ಕಾರ.

ಚಿಕ್ಕ ಮಗುವಿಗೂ ಸಿಎಂ ಬೊಮ್ಮಾಯಿಯವರು ಯಾರೆಂದು ಕೇಳಿದ್ರೇ 40% ಸಿಎಂ, ಪೇ ಸಿಎಂ ಎಂದು ಹೇಳ್ತಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40% ಕಮಿಷನ್ ಬಗ್ಗೆ ಪತ್ರ ಬರೆದ 6 ತಿಂಗಳ ಕಳೆದ್ರು, ಮೋದಿಯಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಬೆಳವಣಿಗೆ ದರದ ಅಪಾಯಕ್ಕೆ ಹತ್ತಿರದಲ್ಲಿದೆ : ರಘುರಾಮ್ ರಾಜನ್