ಪಕ್ಷದಿಂದ ಅಮಾನತು ಮಾಡಿದರೆ ಹೆದರಿಕೊಳ್ಳಬೇಡಿ. ಪಕ್ಷದಿಂದ ಅಮಾನತು ಆದರೆ ಒಂದು ಸರ್ಟಿಫಿಕೇಟ್ ಸಿಕ್ಕಂತೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.
ರಾಯಣ್ಣ ಬ್ರಿಗೇಡ್ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ನಾನೂ ಒಂದಾಗುವ ಸಮಯ ಬಂದೇ ಬರುತ್ತೆ. ಪಕ್ಷದ ಹಿರಿಯ ನಾಯಕರು ನಮ್ಮನ್ನು ಕರೆದು ಚರ್ಚಿಸುತ್ತಾರೆ. ಆವಾಗ ಬಿಎಸ್ವೈ ಅವರೇ ಬ್ರಿಗೇಡ್ನ್ನು ಒಪ್ಪಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೆಂಕಟೇಶ ಮೂರ್ತಿ ಅವರನ್ನು ಅಮಾನತು ಮಾಡಿರುವುದರಿಂದ ಎಲ್ಲರೂ ಹೆದರಿರುತ್ತಾರೆ. ಬಿಎಸ್ವೈ ಮನಸ್ಸಿನಲ್ಲಿ ಇನ್ನೂ ಗೊಂದಲ ಇದೆ. ಅವರಿಗೆ ಬ್ರಿಗೇಡ್ ಬೇಡ ಎಂದು ಯಾರೋ ಹೇಳಿರುತ್ತಾರೆ. ಯಡಿಯೂರಪ್ಪನವರೇ ಯಾಕೆ ನಿಮಗೆ ಬ್ರಿಗೇಡ್ ಬೇಡ ಎಂದು ನೇರವಾಗಿ ಪ್ರಶ್ನಿಸಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ರಾಯಣ್ಣ ಬ್ರಿಗೇಡ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ವೆಂಕಟೇಶ ಮೂರ್ತಿ ಅವರನ್ನು ಬಿಜೆಪಿ ಪಾಳಯದಿಂದ ಅಮಾನತು ಮಾಡಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.