Webdunia - Bharat's app for daily news and videos

Install App

ಹೊಸ ಪಕ್ಷ ರಚನೆ ಇಲ್ಲ; ನಾವು ಒಂದಾಗಿರುತ್ತೇವೆ: ಮುಲಾಯಂ ಸಿಂಗ್ ಯಾದವ್

Webdunia
ಬುಧವಾರ, 11 ಜನವರಿ 2017 (15:36 IST)
ಪುತ್ರನ ಜತೆಗಿರುವ ಶೀತಲ ಸಮರದ ಮಧ್ಯೆ ತನ್ನ ಮಗನೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದ ಸಮಾಜವಾದಿ ಸ್ಥಾಪಕ ಮುಲಾಯಂ ಸಿಂಗ್ ಯಾದವ್, ಮತ್ತೀಗ ಹೊಸ ಪಕ್ಷ ರಚನೆ ಇಲ್ಲ, ನಾವು ಒಂದಾಗಿರುತ್ತೇವೆ ಎಂದಿದ್ದಾರೆ.
ಬುಧವಾರ ಲಖನೌನಲ್ಲಿರುವ ಪಕ್ಷದ ಮುಖ್ಯ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷವನ್ನು ಒಗ್ಗಟ್ಟಿನಿಂದಿಡಿ ಎಂದಿದ್ದಾರೆ. 
 
ಹಲವರ ಹೋರಾಟಗಳ ಫಲವಾಗಿ ಸಮಾಜವಾದಿ ಪಕ್ಷ ಬೆಳೆದಿದೆ. ಪಕ್ಷದ ಕಾರ್ಯಕರ್ತರು ಬಿಕ್ಕಟ್ಟುಗಳನ್ನು ಎದುರಿಸಿ ಪಕ್ಷವನ್ನು ಬೆಳೆಸಿದ್ದಾರೆ. ನಾನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋದಾಗ ಅಖಿಲೇಶ್‌ಗೆ ಕೇವಲ ಎರಡು ವರ್ಷ ಪ್ರಾಯ ಎಂದು ಮುಲಾಯಂ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಹೋದರ ಶಿವಪಾಲ್ ಸಹ ವೇದಿಕೆಯಲ್ಲಿದ್ದರು. 
 
ನಾನೇನು ಹೊಂದಿದ್ದೇನೋ ಅದೆಲ್ಲ ದೇಶಕ್ಕಾಗಿ, ನನ್ನ  ಬಳಿ ಇರವುದನ್ನೆಲ್ಲ ಕೊಟ್ಟಾಗಿದೆ? ಮತ್ತೀಗ ಉಳಿದಿರುವುದು ನೀವು( ಕಾರ್ಯಕರ್ತರು). ಜನತೆಯಿಂದ ನಾವು ನಾಯಕರಾದೆವು ಮತ್ತು ಜನರು ಮತ್ತು ಕಾರ್ಯಕರ್ತರು ಪಕ್ಷದ ಒಗ್ಗಟನ್ನು ಉಳಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
 
ಪಕ್ಷದೊಳಗಿನ ಕಲಹದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ಕೂಡ ಪಕ್ಷದ ಏಕತೆಗೆ ಅಡಚಣೆಯನ್ನುಂಟು ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ದೆಹಲಿಗೆ ಹೋಗಿದ್ದೆ. ನಮ್ಮ ಪಕ್ಷದಲ್ಲಿ ವಿಷ ತುಂಬುತ್ತಿರುವವರು ಯಾರು, ಬೇರೆ ಪಕ್ಷದ ನಾಯಕರೊಂದಿಗೆ ಸೇರಿಕೊಂಡು ತಂತ್ರ ರೂಪಿಸುತ್ತಿರುವವರು ಯಾರು ಎಂಬ ಅರಿವು ನನಗಿದೆ ಎಂದ ಅವರು ನೇರವಾಗಿ ತಮ್ಮ ಸೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ ವಿರುದ್ಧ ಕಿಡಿಕಾರಿದರು.
 
ರಾಮ್ ಗೋಪಾಲ್ ಯಾದವ್ ಬೇರೆ ಪಕ್ಷವನ್ನು ಕಟ್ಟುತ್ತಿದ್ದಾರೆ.  ಕಳೆದ ಕೆಲ ದಿನಗಳಲ್ಲಿ ಮೂರು ಬಾರಿ ಬೇರೆ ಪಕ್ಷದ ಅಧ್ಯಕ್ಷರನ್ನವರು ಭೇಟಿಯಾಗಿದ್ದಾರೆ. ಅವರೀಗ ಬಿಜೆಪಿ ಜತೆ ಸೇರಿಕೊಂಡಿದ್ದಾರೆ. ನಾನು ಅಖಿಲೇಶ್‌ನಲ್ಲಿ ರಾಮಗೋಪಾಲ್ ಹಿಂದೆ ಯಾಕೆ ಬಿದ್ದಿದ್ದೀಯಾ ಎಂದು ಕೇಳಿದೆ ಎಂದಿದ್ದಾರೆ ಮುಲಾಯಂ.
 
ನಾವು ಯಾವುದೇ ಪರಿಸ್ಥಿತಿಯಲ್ಲಿ ಪಕ್ಷದ ಏಕತೆ ಕಾಯ್ದುಕೊಳ್ಳುತ್ತೇವೆ. ನಾವು ಪಕ್ಷದ ಹೆಸರನ್ನು ಬದಲಿಸುವುದಿಲ್ಲ, ಜತೆಗೆ ಚಿಹ್ನೆಯನ್ನು ಕೂಡ ಬದಲಿಸುವುದಿಲ್ಲ. ನಮ್ಮ ಸೈಕಲ್‌ನ್ನು ನಮ್ಮ ಜತೆ ಇಟ್ಟುಕೊಳ್ಳ ಬಯಸುತ್ತೇವೆ ಎಂದು ಮುಲಾಯಂ ಘೋಷಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಮುಂದಿನ ಸುದ್ದಿ
Show comments