Select Your Language

Notifications

webdunia
webdunia
webdunia
webdunia

ಮಗ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ: ರಮಾನಾಥ್ ರೈ

ಮಗ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ: ರಮಾನಾಥ್ ರೈ
ಕೊಡಗು , ಸೋಮವಾರ, 25 ಜುಲೈ 2016 (18:09 IST)
ನನ್ನ ಮಗ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ರಮಾನಾಥ್ ರೈ ಸ್ಪಷ್ಟಪಡಿಸಿದ್ದಾರೆ.
 
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ತಪ್ಪು ಮಾಡಿದ್ದರೆ, ಕಾನೂನು ಕ್ರಮ ಕ್ರಮ ಜರುಗಿಸಲಿ. ಪ್ರಕರಣದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
 
ನನ್ನ ರಾಜಕೀಯ ಜೀವನದಲ್ಲಿ ನನ್ನ ಮಗ ಮೂಗು ತೂರಿಸಲ್ಲ. ಸಾರ್ವಜನಿಕವಾಗಿ ಮಂಗಳೂರು ಹಾಗೂ ಕೊಡಗಿನ ಜನತೆಗೆ ನನ್ನ ಪುತ್ರ ದೀಪಕ್‌ ಮುಖ ಪರಿಚಯವಿಲ್ಲ ಎಂದು ತಿಳಿಸಿದರು.
 
ಮಕ್ಕಳು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಎಂದು ನೋಡಲು ಸಾಧ್ಯವಾಗುತ್ತಾ. ಬೇರೆಯವರ ಮಕ್ಕಳು ಏನು ಮಾಡುತ್ತಿದ್ದಾರೆ, ಏನು ಮಾಡಿದ್ದಾರೆ ಎಂದು ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.
 
ನಿನ್ನೆ ಗೆಳೆಯರ ಜೊತೆ ಎಣ್ಣೆ ಪಾರ್ಟಿ ಮಾಡುತ್ತಾ ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ತೋರಿದ್ದಾರೆ ಎಂದು ಸಚಿವ ರಮಾನಾಥ್ ರೈ ಅವರ ಪುತ್ರ ದೀಪು ರೈ ಅವರ ವಿರುದ್ಧ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
 
ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ತೋರಿ ಪುಂಡಾಟಿಕೆ ಮೇರೆದಿರುವುದನ್ನು ಪ್ರಶ್ನಿಸಿದ ಸ್ಥಳೀಯರಿಗೆ ನಾನು ಮಂತ್ರಿ ಮಗ ನಿಮ್ಮನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಧಮ್ಕಿ ಹಾಕಿದ್ದಲ್ಲದೆ, ಸ್ನೇಹಿತರೊಂದಿಗೆ ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಕ್ರೋಶಗೊಂಡ ಸ್ಥಳಿಯರು ಮಂತ್ರಿ ಪುತ್ರನನ್ನು ಬಾರಕೋಲಿನಿಂದ ಬಾರಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಭಯೋತ್ಪಾದಕರನ್ನು ಹಿಡಿಯೋರಿಗೆ ಮರಿಗೌಡನನ್ನು ಹಿಡಿಯಲಾಗುವುದಿಲ್ಲವೇ: ಪರಮೇಶ್ವರ್ ತಿರುಗೇಟು