ಪೇಜಾವರ ಶ್ರೀ ಪರ ಸಚಿವ ಆಂಜನೇಯ ಬ್ಯಾಟಿಂಗ್

Webdunia
ಶುಕ್ರವಾರ, 14 ಅಕ್ಟೋಬರ್ 2016 (15:33 IST)
ಉಡುಪಿಯ ಪೇಜಾವರ ಶ್ರೀಗಳ ಪರವಾಗಿ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಬ್ಯಾಟ್ ಬೀಸಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಸಚಿವರು, ಶ್ರೀಗಳು ದಲಿತರ ಪರವಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ದಲಿತ ಕೇರಿಗಳಿಗೆ ಹೋಗಿದ್ದಾರೆ. ಅವರ ಜೊತೆ ಮಾತನಾಡಲು ನಾನು ಸಿದ್ಧ ಎಂದು ಹೇಳಿದ್ದಾರೆ. 
 
ಯಾರು ಕೂಡ ಮಠಕ್ಕೆ ಮುತ್ತಿಗೆ ಹಾಕುವುದು ಸರಿಯಲ್ಲ. ಹಾಗೆಯೇ ಕೃಷ್ಣ ಮಠದಲ್ಲಿ ಪಂಕ್ತಿಬೇಧ ಕೂಡ ಮಾಡಬಾರದು ಎಲ್ಲರನ್ನು
ಸಮಾನತೆಯಿಂದ ಕಾಣಬೇಕು ಎಂದು ಅವರು ಆಗ್ರಹಿಸಿದ್ದಾರೆ.
 
ದಲಿತ ಕಲಾವಿದರಿಗೆ ಸಿಂಗಾಪುರ ಪ್ರವಾಸ ಆಯೋಜಿಸಿರುವ ಬಗ್ಗೆ ಮಾಹಿತಿ ನೀಡಿದ ಅವರು ಅಮೇರಿಕಾಕ್ಕೆ ಹೊರಟಿದ್ದಾಗ ವೀಸಾ ಸಿಗದೇ ಪ್ರವಾಸ ರದ್ದಾಗಿತ್ತು. ಮತ್ತೀಗ ಸಿಂಗಾಪುರದ ಕನ್ನಡ ಸಮಾರಂಭಕ್ಕೆ ಕಳುಹಿಸುತ್ತಿದ್ದೇವೆ. 29, 30 ರಂದು ದಲಿತ ಕಲಾವಿದರು ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂದು  ತಿಳಿಸಿದ್ದಾರೆ. 
 
ಭಾನುವಾರ ನಡೆದ ಉಡುಪಿ ಉಡುಪಿ ಚಲೋ ಸಮಾವೇಶದಲ್ಲಿ, ಶ್ರೀಕೃಷ್ಣಮಠದಲ್ಲಿ ಪಂಕ್ತಿಬೇಧ ನಡೆಯುತ್ತಿದೆ. ಇದನ್ನು ವಿರೋಧಿಸಿ ಮಠಕ್ಕೆ ಮುತ್ತಿಗೆ  ಹಾಕುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದರು. ಮಠಕ್ಕೆ ಮುತ್ತಿಗೆ ಹಾಕಿದರೆ ತಾವು ಅನಿರ್ದಾಷ್ಟವಧಿ ಉಪವಾಸ ಆರಂಭಿಸುವುದಾಗಿ ಗುರುವಾರ ಶ್ರೀಗಳು ಎಚ್ಚರಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚುನಾವಣಾ ಆಯೋಗಕ್ಕೂ ಅಂಕುಶವಿರಬೇಕು ಎಂಬ ರಾಹುಲ್ ಗಾಂಧಿ ಅಭಿಪ್ರಾಯ ಒಪ್ಪುತ್ತೀರಾ

ನಾನೇನು ಮಾತನಾಡಬೇಕೆಂದು ನಾನು ನಿರ್ಧರಿಸುತ್ತೇನೆ: ರಾಹುಲ್ ಗಾಂಧಿ ಬೆವರಿಳಿಸಿದ ಅಮಿತ್ ಶಾ Video

ಸಿಎಂ ಬದಲಾವಣೆ ಬಗ್ಗೆ ಬೆಳಗಾವಿಯಲ್ಲೇ ನಡೆಯಿತು ಮಹತ್ವದ ವಿದ್ಯಮಾನ

ಚರ್ಚೆಗೆ ಬನ್ನಿ ಎಂದು ಅಮಿತ್ ಶಾಗೆ ಸವಾಲು ಹಾಕಿ ರಾಹುಲ್ ಗಾಂಧಿ ವಿದೇಶಕ್ಕೆ ಹೋದರೆ ಹೇಗೆ

Karnataka Weather: ತಾಪಮಾನದಲ್ಲಿ ಮತ್ತಷ್ಟು ಇಳಿಕೆ, ಹವಾಮಾನ ವರದಿ ಗಮನಿಸಿ

ಮುಂದಿನ ಸುದ್ದಿ
Show comments