Select Your Language

Notifications

webdunia
webdunia
webdunia
webdunia

ಎಲ್ಲರು ನನ್ನ ಸುತ್ತ ಸುತ್ತೋಕೆ ನಾನೇನು ಸೂರ್ಯ ಅಲ್ಲ: ಕರಂದ್ಲಾಜೆ

ಎಲ್ಲರು ನನ್ನ ಸುತ್ತ ಸುತ್ತೋಕೆ ನಾನೇನು ಸೂರ್ಯ ಅಲ್ಲ: ಕರಂದ್ಲಾಜೆ
ಬೆಂಗಳೂರು , ಬುಧವಾರ, 29 ಜೂನ್ 2016 (15:14 IST)
ರಾಜ್ಯಾಧ್ಯಕ್ಷರು ನೀಡಿದ ಆದೇಶವನ್ನು ಪಾಲಿಸುವುದು ನನ್ನ ಕರ್ತವ್ಯ. ಪದಾಧಿಕಾರಿಗಳ ನೇಮಕದಲ್ಲಿ ನಾನು ಹಸ್ತಕ್ಷೇಪ ನಡೆಸಿಲ್ಲ.ಎಲ್ಲರು ನನ್ನ ಸುತ್ತ ಸುತ್ತೋಕೆ ನಾನೇನು ಸೂರ್ಯ ಅಲ್ಲ ಎಂದು ಉಡುಪಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಯಡಿಯೂರಪ್ಪ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
 
ಹಿಂದೆ ಬಸವರಾಜ್ ಪಾಟೀಲ್ ಸೇಡಂ, ಸದಾನಂದಗೌಡ ಜಗದೀಶ್ ಶೆಟ್ಟರ್ ರಾಜ್ಯದ ಅಧ್ಯಕ್ಷರಾಗಿದ್ದಾಗ ನನಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅದರಂತೆ, ಇದೀಗ ಯಡಿಯೂರಪ್ಪ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
 
ಪದಾಧಿಕಾರಿಗಳ ನೇಮಕವಾಗುವಾಗ ನಾನೂ ಬೆಂಗಳೂರಿನಲ್ಲಿ ಇರಲಿಲ್ಲ. ಯಾರು ಯಾರು ಪದಾಧಿಕಾರಿಗಳಾಗಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಪದಾಧಿಕಾರಿಗಳ ಪಟ್ಟಿ ಕೂಡಾ ನನ್ನ ಬಳಿಯಿಲ್ಲ ಎಂದು ತಿಳಿಸಿದ್ದಾರೆ.
 
ಬಿಜೆಪಿ ಮುಖಂಡ ವಿಧಾನಪರಿಷತ್ ಸದಸ್ಯ ಕೆ.ಎಸ್.ಈಶ್ವರಪ್ಪನವರ ಅನುಭವ ನನ್ನ ವಯಸ್ಸಿಗಿಂತಲೂ ಹೆಚ್ಚಾಗಿದೆ ಎಂದು ಉಡುಪಿ ಸಂಸದ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್‌ಬುಕ್‌ನಲ್ಲಿ ಕಳುಹಿಸಿದ ಸಂದೇಶಗಳನ್ನು ಅಳಿಸಿಹಾಕಬಹುದಂತೆ..!