Select Your Language

Notifications

webdunia
webdunia
webdunia
webdunia

ನೀನು ಮಾಡೋದೆಲ್ಲಾ ಗೊತ್ತಾಗಲ್ಲ ಅನ್ಕೋಂಡಿದ್ದೀಯಾ: ಡಿಕೆಶಿಗೆ ಕೃಷ್ಣಪ್ಪ ತರಾಟೆ

ಡಿ.ಕೆ.ಶಿವಕುಮಾರ್
ಬೆಂಗಳೂರು , ಭಾನುವಾರ, 19 ಜೂನ್ 2016 (19:33 IST)
ನೀನು ಮಾಡೋದನ್ನೇಲ್ಲಾ ಗೊತ್ತಾಗಲ್ಲ ಅನ್ಕೋಂಡಿದ್ದೀಯಾ ನನಗೆ ಸಚಿವ ಸ್ಥಾನ ತಪ್ಪಿಸಿದ್ದು ನೀನೆ ಎಂದು ಡಿ.ಕೆ. ಶಿವಕುಮಾರ್‌ಗೆ ಶಾಸಕ ಎಂ.ಕೃಷ್ಣಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.
 
ಮಾಡು ಮಾಡು ಏನ್ ಮಾಡ್ತಿಯೋ ಮಾಡು. ನಮಗೆಲ್ಲಾ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ನಾವು ರಾಜಕಾರಣ ಮಾಡುತ್ತೇವೆ ಎಂದು ಸವಾಲ್ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಕೃಷ್ಣಪ್ಪ ಅವರ ಮಾತಿಗೆ ಉತ್ತರಿಸಿದ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನಿಮ್ಮ ಸಚಿವ ಸ್ಥಾನ ತಪ್ಪುವುದರಲ್ಲಿ ನನ್ನ ಯಾವ ಪಾತ್ರವು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
 
ಡಿ.ಕೆ.ಶಿವಕುಮಾರ್ ನಿನ್ನೆ ರಾತ್ರಿ ಹೈಕಮಾಂಡ್‌ಗೆ ಫೋನ್ ಮಾಡಿ ಕೃಷ್ಣಪ್ಪ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರಿಂದ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವುದರಲ್ಲಿ ಯಾವ ಲಾಭವಿಲ್ಲ ಎಂದು ಮನವರಿಕೆ ಮಾಡಿಕೊಟ್ಟ ನಂತರ ಕೃಷ್ಣಪ್ಪ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿದೆ ಎಂದು ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

8 ಶಾಸಕರು ರಾಜೀನಾಮೆ ಕೊಡೋದೆಲ್ಲ ಸುಳ್ಳು : ಸಿಎಂ ಸಿದ್ದರಾಮಯ್ಯ