Select Your Language

Notifications

webdunia
webdunia
webdunia
webdunia

ನಿಮ್ಮನ್ನು ಅಧಿಕಾರದಿಂದ ಇಳಿಸುವ ತನಕ ನಾನು ವಿಶ್ರಮಿಸುವುದಿಲ್ಲ- ಸಿಎಂ ಗೆ ಮಾಜಿ ಸಿಎಂ ಸವಾಲು

ನಿಮ್ಮನ್ನು ಅಧಿಕಾರದಿಂದ ಇಳಿಸುವ ತನಕ ನಾನು ವಿಶ್ರಮಿಸುವುದಿಲ್ಲ- ಸಿಎಂ ಗೆ ಮಾಜಿ ಸಿಎಂ ಸವಾಲು
ಬೆಂಗಳೂರು , ಬುಧವಾರ, 21 ನವೆಂಬರ್ 2018 (14:26 IST)
ಬೆಂಗಳೂರು : ರೈತ ಮಹಿಳೆಗೆ ಅವಮಾನ ಮಾಡಿದ ಸಿಎಂ ಕುಮಾರಸ್ವಾಮಿ ವಿರುದ್ಧ ಇಂದು ಪ್ರತಿಭಟನೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಅವರು ನಾವು ನಿಮ್ಮ ದೊಂಬರಾಟ ನೋಡುತ್ತಾ ಸುಮ್ಮನಿರುವುದಿಲ್ಲ, ನಿಮ್ಮನ್ನು ಅಧಿಕಾರದಿಂದ ಇಳಿಸುವ ತನಕ ನಾನು ವಿಶ್ರಮಿಸುವುದಿಲ್ಲ ಅಂತ ಪ್ರತಿಜ್ಞೆ ಮಾಡಿದ್ದಾರೆ.


ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ವೇಳೆ ಮಾತನಾಡಿ ಅವರು ನಿಮಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ರಾಜೀನಾಮೆ ಬಿಸಾಕಿ ಹೋಗಿ. ಮಹಿಳೆಗೆ ಈ ರಾಜ್ಯದ ಮುಖ್ಯಮಂತ್ರಿ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇನ್ನು ನಮ್ಮ ಹೋರಾಟ ಇಂದು ಆರಂಭವಾಗಿದೆ. ನಿಮ್ಮನ್ನು ಮನೆಗೆ ಕಳಿಸುವವರೆಗೂ ಹೋರಾಟ ಮುಂದುವರಿಯುತ್ತದೆ. ರೈತ ಮಹಿಳೆಗೆ ಕ್ಷಮಾಪಣೆ ಕೇಳಲೂ ನೀವು ಸಿದ್ಧರಿಲ್ಲ. ನಿದ್ರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ. ಹುಬ್ಬಳ್ಳಿಯಲ್ಲಿ ಮನೆ ಮಾಡಿ ಅಲ್ಲಿಗೂ ಹೋಗಲಿಲ್ಲ ಅಂತ ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಮ್ ಎಸ್.ಬಿ.ಐ. ಪೇ ಆಪ್ ಮೂಲಕ ಪೆಟ್ರೋಲ್ ಗೆ ಹಣ ಪಾವತಿ ಮಾಡುವ ವಾಹನ ಸವಾರರಿಗೆ ಬಂಫರ್ ಆಫರ್