Select Your Language

Notifications

webdunia
webdunia
webdunia
webdunia

ನನ್ನ ಬದುಕಿನಲ್ಲಿ ಎಂದೂ ಮದ್ಯ ಹಂಚಿ ರಾಜಕೀಯ ಮಾಡಿಲ್ಲ: ಡಾ.ಕೆ.ಸುಧಾಕರ್

ನನ್ನ ಬದುಕಿನಲ್ಲಿ ಎಂದೂ ಮದ್ಯ ಹಂಚಿ ರಾಜಕೀಯ ಮಾಡಿಲ್ಲ: ಡಾ.ಕೆ.ಸುಧಾಕರ್

Sampriya

ಬೆಂಗಳೂರು , ಸೋಮವಾರ, 8 ಜುಲೈ 2024 (16:29 IST)
Photo Courtesy X
ಬೆಂಗಳೂರು: ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದಲ್ಲಿ ಕಾರ್ಯಕರ್ತರಿಗೆ ಬಾಡೂಟದ ಜತೆಗೆ ಮದ್ಯ ಹಂಚಿದ ಆರೋಪದ ಬಗ್ಗೆ ಸಂಸದ ಡಾ.ಕೆ.ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ.  

ನನ್ನ  20 ವರ್ಷದ ರಾಜಕಾರಣದಲ್ಲಿ ನಾನು ಎಂದೂ ಮದ್ಯ ಹಂಚಿಕೆ ಮಾಡಿಲ್ಲ. ಆದರೆ ನಮ್ಮದೇ ಕಾರ್ಯಕರ್ತರು ಮದ್ಯ ಹಂಚಿಕೆ ಮಾಡಿದ್ದರು ಅದು ತಪ್ಪೇ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಈ ಘಟನೆಯಿಂದ ತುಂಬಾನೇ ನೋವಾಗಿದೆ. ಈ ವಿಚಾರ ನನಗೆ ತಿಳಿದಿದ್ದು ಮಾಧ್ಯಮಗಳಿಂದ ಎಂದರು.

ಈ ಕುರಿತು ಚಿಕ್ಕಬಳ್ಳಾಪರ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿ ಮಾತನಾಡಿದ ಡಾ.ಕೆ.ಸುಧಾಕರ್, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನನಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ಆಯೋಜನೆ ಮಾಡಿದ್ದರು.  ನಾನು ಹಾಗೂ ವಿಪಕ್ಷ ನಾಯಕ ಆರ್‌ ಅಶೋಕ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು. ಸಭೆಯಲ್ಲಿ ಮಾತನಾಡಿ ನಾವು ಹೊರಬಂದೆವು. ಮದ್ಯ ಹಂಚಿಕೆ ಮಾಡಿರುವುದು ನನಗೆ ತಿಳಿದಿಲ್ಲ. ಈ ವಿಚಾರ ಗೊತ್ತಾಗಿದ್ದೆ ಮಾಧ್ಯಮಗಳಿಂದ ಎಂದರು.  

ನನ್ನ ರಾಜಕೀಯ ಜೀವನದಲ್ಲಿ ನಾನು ಇದುವರೆಗೂ ಮದ್ಯ ಹಂಚಿಕೆ ಮಾಡಿ ರಾಜಕಾರಣ ಮಾಡಿಲ್ಲ. ಇನ್ನೂ ಈ ರೀತಿ ನಮ್ಮದೇ ಕಾರ್ಯಕರ್ತರು ಮಾಡಿದ್ದರು, ಅದು ತಪ್ಪೇ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರೈತರಿಗೆ ಸಿಹಿ ಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ