Webdunia - Bharat's app for daily news and videos

Install App

ದರ್ಶನ್ ಸ್ನೇಹಿತರಿಂದಲೇ ನನಗೆ ಬೆದರಿಕೆ: ನಿರ್ಮಾಪಕ ಉಮಾಪತಿ

Webdunia
ಸೋಮವಾರ, 12 ಜುಲೈ 2021 (16:26 IST)
ದರ್ಶನ್ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ, ಪ್ರಕರಣದ ಕುರಿತು ಪೊಲೀಸರ ಮುಂದೆ ಹೇಳಿಕೆ ನೀಡದಂತೆ ದರ್ಶನ್ ಸ್ನೇಹಿತರಾದ ಹರ್ಷ, ರಾಕೇಶ್ ಮತ್ತು ಶರ್ಮ ಅವರಿಂದ ನನಗೆ ಬೆದರಿಕೆ ಇದೆ ಎಂದಿದ್ದಾರೆ.
ಸ್ನೇಹಿತರಿಂದಲೇ ದರ್ಶನ್ ಅವರನ್ನು ದೂರ ಮಾಡಲು ಯತ್ನಿಸಿಲ್ಲ. ಯಾರನ್ನೂ ಯಾರಿಂದಲೂ ದೂರ ಮಾಡುವ ಚೀಪ್ ಕ್ಯಾರೆಕ್ಟರ್ ನಂದಲ್ಲ. ನನಗೆ ಅದರ ಅವಶ್ಯಕತೆ ಕೂಡ ಇಲ್ಲ. ನನಗೆ 25 ಕೋಟಿ ಲೆಕ್ಕವೇ ಅಲ್ಲ. ನಮ್ಮಪ್ಪ ಕೊಟ್ಟ ಭಿಕ್ಷೆಯಿಂದ ನಾನು ಬದುಕುತ್ತಿದ್ದೇನೆ. ಯಾರಿಗೋ ಮೋಸ ಮಾಡಿ ಬದುಕುವ ಅವಶ್ಯಕತೆ ನನಗಿಲ್ಲ. ಎಂದು ಉಮಾಪತಿ ಸ್ಪಷ್ಟಪಡಿಸಿದರು.
ದರ್ಶನ್ ಹೇಳಿದಂತೆ ನನಗೆ 2 ದಿನ ಸಮಯ ಕೊಟ್ಟಿಲ್ಲ. ಬದಲಾಗಿ ನಾನೇ 2-3 ದಿನ ಸಮಯ ಕೊಡಿ ಪತ್ತೆ ಹಚ್ಚುತ್ತೇನೆ ಎಂದು ಹೇಳಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ. ನಿನ್ನೆ ಮಾಧ್ಯಮದಲ್ಲಿ ಯಾವುದೇ ಹೇಳಿಕೆ ಕೊಡಬೇಡ ಎಂದು ದರ್ಶನ್ ಸೂಚಿಸಿದ್ದಕ್ಕೆ ಮಾತನಾಡಲಿಲ್ಲ ಎಂದು ಅವರು ಹೇಳಿದರು.
ನನಗೆ ಸಿನಿಮಾವೇ ಜೀವನ. ನಾನು ಆರ್ಥಿಕವಾಗಿ ಚೆನ್ನಗಿದ್ದೇನೆ. ನನಗೆ ಹಣದ ಅವಶ್ಯಕತೆ ಇಲ್ಲ. ನನಗೆ5-6 ಬ್ಯುಸಿನೆಸ್ ಇದೆ. ವಿಜಯನಗರದಲ್ಲಿ ಹರಾಜು ಮೂಲಕ ಆಸ್ತಿ ಖರೀದಿ ಮಾಡುವಾಗ ಅರುಣಾಕುಮಾರಿ ನನಗೆ ಪರಿಚಯ ಆಗಿದ್ದು, ದರ್ಶನ್ ಗೆ ಕರೆ ಮಾಡಿ ಮಾತನಾಡಿದ ನಂತರವೇ ಆಕೆಯನ್ನು ಪರಿಚಯಿಸಿದ್ದೆ ಎಂದು ಉಮಾಪತಿ ವಿವರಿಸಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments