Select Your Language

Notifications

webdunia
webdunia
webdunia
webdunia

ಸಂಪುಟ ಪುನಾರಚನೆಯ ಬಗ್ಗೆ ಗೊತ್ತೇ ಇಲ್ಲ: ಖರ್ಗೆ

ಸಂಪುಟ ಪುನಾರಚನೆ
ನವದೆಹಲಿ , ಶನಿವಾರ, 18 ಜೂನ್ 2016 (18:42 IST)
ಸಂಪುಟ ಪುನಾರಚನೆಯ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಟ್ಟ ವಿಚಾರ. ಅದ್ದರಿಂದ, ಸಂಪುಟ ವಿಸ್ತರಣೆಯ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಗೊತ್ತಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
 
ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕ್ಯಾಪ್ಟನ್ ಆಫ್ ದಿ ಸ್ಟೇಟ್ ಆಗಿರುವುದರಿಂದ ಸಂಪುಟ ಪುನಾರಚನೆಯಾಗಬೇಕೋ ಅಥವಾ ಸಂಪುಟ ವಿಸ್ತರಣೆಯಾಗಬೇಕೋ ಎನ್ನುವ ತೀರ್ಮಾನ ಅವರು ತೆಗೆದುಕೊಳ್ಳುತ್ತಾರೆ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಸಂಪುಟ ಪುನಾರಚನೆಯಲ್ಲಿ ನಿಮ್ಮ ಬೆಂಬಲಿಗರನ್ನು ಕೈಬಿಡಲಾಗಿದೆಯಲ್ಲಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿರುವವರೆಲ್ಲರು ನನ್ನ ಬೆಂಬಲಿಗರು. ಅವರು ಬೇರೆ ಇವರು ಬೇರೆ ಎನ್ನುವ ಮಾತಿಲ್ಲ. ಎಲ್ಲರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಶಿಸ್ತಿನ ಸಿಪಾಯಿಗಳು ಎಂದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಭವಿಗಳು. ಅವರಿಗೆ ತಮ್ಮ ಸಂಪುಟದಲ್ಲಿ ಎಂತಹ ಸಚಿವರು ಇರಬೇಕು ಎನ್ನುವ ಬಗ್ಗೆ ಗೊತ್ತಿದೆ. ಆದ್ದರಿಂದ, ಸಂಪುಟ ಪುನಾರಚನೆಯ ವಿಷಯದಲ್ಲಿ ನಮ್ಮ ಹಸ್ತಕ್ಷೇಪ ಸರಿಯಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ  ಹೇಳಿದ್ದಾರೆ.  

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯು.ಟಿ.ಖಾದರ್‌ಗೆ ಸೋನಿಯಾ ಗಾಂಧಿ ಶಹಬ್ಬಾಸ್‌ಗಿರಿ