Webdunia - Bharat's app for daily news and videos

Install App

ನಾನು ಮಹಾಕಾಳಿಯ ಆರಾಧಕಿ; ಯಾರೊಂದಿಗೂ ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂದವಳಾರು?

Webdunia
ಸೋಮವಾರ, 17 ಡಿಸೆಂಬರ್ 2018 (14:16 IST)
ನಾನು ಶ್ರೀ ಮಾತೆ ಮಹಾಕಾಳಿ ದೇವಿಯ ಆರಾಧಕಿ ಹಾಗೂ ನಾನೊಬ್ಬಳು ಕಟ್ಟಾ ಸನ್ಯಾಸಿನಿ. ಆದರೆ ಇತ್ತೀಚಿಗೆ ಕೆಲವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಮಾಜಿ ಸಚಿವ  ವಿನಯ ಕುಲಕರ್ಣಿ ಹಾಗೂ ಮುರುಘಾಮಠದ ಶಿವಯೋಗಿ ಸ್ವಾಮಿಗಳ ಜೊತೆ ಅನೈತಿಕ ಸಂಬಂಧ ಇದೆ ಎಂಬುದು ಶುದ್ಧ ಸುಳ್ಳು ಎಂದು ಕರ್ನಾಟಕ ಕೃಷಿಕ ಮತ್ತು ಕೃಷಿ ಕೂಲಿ ಕಾರ್ಮಿಕ ಹಿತರಕ್ಷಣಾ ಸಮಿತಿಯ ಸಂಚಾಲಕರಾದ ವಿಜಯಲಕ್ಷ್ಮಿ ಸುಳ್ಳೋಳ್ಳಿ ಹೇಳಿದರು.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲಿಯೇ ನಾನು ಸಂನ್ಯಾಸವನ್ನು ಹೊಂದಿದ್ದು, ಮಹಾಕಾಳಿಯನ್ನು ಆರಾಧನೆ ಮಾಡುತ್ತಾ ಬಂದಿದ್ದೇನೆ.  ಆದರೆ ಕೆಲ ಕಿಡಿಗೇಡಿಗಳು ನನ್ನ ಬಗ್ಗೆ ಕರಪತ್ರ ಹಂಚುತ್ತಿದ್ದಾರೆ. ಶಿವಯೋಗಿ ಸ್ವಾಮಿಗಳು ನನ್ನ ತಂದೆಯ ಸಮಾನರು. ನಾನು ಯಾರೊಂದಿಗೂ ಅನೈತಿಕ ಸಂಬಂಧವನ್ನು ಹೊಂದಿಲ್ಲ.

ನಾನು ನನ್ನ ಬುದ್ದಿಮಾಂದ್ಯ ತಮ್ಮ ಹಾಗೂ ಸಾಕು ಮಗಳೊಡನೆ ಜೀವನ ಸಾಗಿಸುತ್ತಿದ್ದೇನೆ ಹೊರತು ಅವರು ನನ್ನ ಮಕ್ಕಳಲ್ಲ. ಆದರೆ ಕೆಲವರು ತಮ್ಮ ಹಾಗೂ ಸಾಕು ಮಗಳನ್ನೇ ನನ್ನ ಹಾಗೂ ಶಿವಯೋಗಿ ಸ್ವಾಮೀಜಿಯ ಮಕ್ಕಳು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಇದರಿಂದ ನನಗೆ ಮಾನಸಿಕ ಹಿಂಸೆ   ಆಗುತ್ತಿದೆ. ಹೀಗಾಗಿ ನನಗೆ ನ್ಯಾಯ ಒದಗಿಸಬೇಕು ಎಂದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments