Publish Date: Wed, 30 Nov 2022 (15:54 IST)
Updated Date: Wed, 30 Nov 2022 (16:10 IST)
ಸಂವಿಧಾನ ಆಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪೋಟೋ ಮಾಯವಾಗಿತ್ತು.ಸಂವಿಧಾನ ಶಿಲ್ಪಿ ಪೋಟೋ ಇಲ್ಲದೆ ಕಾರ್ಯಕ್ರಮ ಆಯೋಜಿಸಿದ ಯುನಿವರ್ಸಿಟಿ ಲಾ ಕಾಲೇಜ್ ಅಂಡ್ ಡಿಪಾರ್ಟ್ಮೆಂಟ್ ಆಫ್ ಸ್ಟಡೀಸ್ ಇನ್ ಲಾ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಪಿಎಚ್ಡಿ ವಿದ್ಯಾರ್ಥಿಗಳು ಗಲಾಟೆ ಮಾಡಿದ ನಂತರ ಆಡಳಿತ ಮಂಡಳಿ ಎಚ್ಚೇತ್ತುಕೊಂಡಿದ್ದು.ಗಲಾಟೆ ನಂತರ ಅಂಬೇಡ್ಕರ್ ಪೋಟೋವಿಟ್ಟು ವಿವಿ ಆಡಳಿತ ಮಂಡಳಿ ಗೌರವ ಸಲ್ಲಿಸಿದೆ.ನಂತರ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟರ್ ವಿದ್ಯಾರ್ಥಿಗಳ ಹತ್ತಿರ ಕ್ಷಮೆ ಕೇಳಿದ್ದಾರೆ.ಈ ಕುರಿತು ಸಂವಿಧಾನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪೋಟೋವಿಟ್ಟು ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ.