Webdunia - Bharat's app for daily news and videos

Install App

ಮಹಾಲಕ್ಷ್ಮೀ ಕೊಲೆ ಹಿಂದೆ ಆಶ್ರಫ್ ಕೈವಾಡವಿದೆ ಎಂದ ಪತಿ

Sampriya
ಭಾನುವಾರ, 22 ಸೆಪ್ಟಂಬರ್ 2024 (18:13 IST)
ಬೆಂಗಳೂರು: ಇಡೀ ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಮಹಾಲಕ್ಷ್ಮೀ ಕೊಲೆ ಪ್ರಕರಣ ಸಂಬಂಧ ಆಕೆಯ ಪತಿ ಹೇಮಂತ್ ಅವರು ಆಶ್ರಫ್ ಎಂಬಾತನ ಮೇಲೆ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಪತ್ನಿ ಕೊಲೆ ಬಗ್ಗೆ ಇಂದು ಮಾಧ್ಯಮಗಳ ಬಳಿ ಮಾತನಾಡಿದ ಹೇಮಂತ್ ದಾಸ್ ಅವರು, ಮಹಾಲಕ್ಷ್ಮೀ ಕಳೆದ ವರ್ಷದಿಂದ ಆಶ್ರಫ್‌ ಎಂಬಾತನ ಜತೆ ಸಂಪರ್ಕದಲ್ಲಿರುವುದು ಗೊತ್ತಿತ್ತು. ಈ ಬಗ್ಗೆ ಆಕೆಗೆ ಬುದ್ಧಿವಾದ ಹೇಳಿ, ಅಶ್ರಫ್ ವಿರುದ್ಧ ದೂರನ್ನು ನೀಡಿದ್ದೆ. ಆ ನಂತರ ನನಗೆ ಆತನ ಜತೆ  ಸಂಪರ್ಕವಿರಲಿಲ್ಲ. ಈ ಸಂಬಂಧ ಮತ್ತೇ ನಮ್ಮಿಬ್ಬರ ಮಧ್ಯೆ ಭಿನ್ನಾಬಿಪ್ರಾಯ ಹುಟ್ಟಿಕೊಳ್ಳಿತು. ಮಹಾಲಕ್ಷ್ಮೀ ನನ್ನ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಳು. ಆದಾದ ಮೇಲೆ ಕಳೆದ 9ತಿಂಗಳಿನಿಂದ ಆಕೆ ಬೆಂಗಳೂರಿಗೆ ಬಂದು ಒಬ್ಬಂಟಿಯಾಗಿ ನೆಲೆಸಿದ್ದಳು. ನಾಲ್ಕು ತಿಂಗಳು ಮಗು ಆಕೆಯ ಜತೆಗಿತ್ತು. ಕಳೆದ 5 ತಿಂಗಳಿನಿಂದ ಮಗನನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದರು.

ಮಹಾಲಕ್ಷ್ಮೀ ಮನೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಮನೆ ಮಾಲೀಕರು ಕರೆ ಮಾಡಿ ತಿಳಿಸಿದ್ದರು. ಈ ಬಗ್ಗೆ ಮಹಾಲಕ್ಷ್ಮೀ ಅಕ್ಕನಿಗೆ ಮಾಹಿತಿ ನೀಡಿದ್ದೆ. ಅವರು ಬಂದು ಬಾಗಿಲು ತೆರೆದು ನೋಡಿದಾಗ ಕೊಲೆ ಮಾಡಿ, ಆಕೆಯ ದೇಹವನ್ನು ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಶೇಖರಣೆ ಮಾಡಿಟ್ಟಿರುವುದು ಬೆಳಕಿಗೆ ಬಂದಿದೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments