Webdunia - Bharat's app for daily news and videos

Install App

ಮಹಿಳೆಯೊಂದಿಗೆ ಪತಿಯ ಚೆಲ್ಲಾಟ: ಆತ್ಮಹತ್ಯೆಗೆ ಶರಣಾದ ಪತ್ನಿ

Webdunia
ಗುರುವಾರ, 9 ನವೆಂಬರ್ 2023 (17:07 IST)
28 ವರ್ಷ ವಯಸ್ಸಿನ ಆಯುರ್ವೇದಿಕ್ ವೈದ್ಯೆಯೊಬ್ಬರು ತಮ್ಮ  ಫ್ಲಾಟ್‌ನ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದೆಹಲಿಯ ನಗರದಲ್ಲಿ ವರದಿಯಾಗಿದೆ. ದೆಹಲಿಯ ಸರೋಜಾ ಬೇನಿವಾಲ್ ತನ್ನ ಎರಡೂವರೆ ವರ್ಷ ವಯಸ್ಸಿನ ಪುತ್ರಿಯ ಎದುರೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ವೈದ್ಯ ಪತಿ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ತೀವ್ರ ಬೇಸರಗೊಂಡಿದ್ದ ಕುಮುದಾ ಆತ್ಮಹತ್ಯೆಗೆ ಶರಣಾದರು.
 
 ಸರೋಜಾ ಬೇನಿವಾಲ್  ಪತಿ ಕಿಶೋರ್ ತಪ್ಪಿಸಿಕೊಂಡಿದ್ದು, ಸಂಶಯಾಸ್ಪದ ಸಾವನ್ನು ಕೂಡ ಪೊಲೀಸರು ತಳ್ಳಿಹಾಕಿಲ್ಲ.  ಸರೋಜಾ  ಪತಿಯ ಮನೆಯವರು ತಮ್ಮ ಪುತ್ರನನ್ನು ನೋಡಲು ಮನೆಯ ಬಾಗಿಲು ತಟ್ಟಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಆಗ ಮಗು ಒಳಗಿನಿಂದ ಅಳುವುದನ್ನು ನೋಡಿ ಗಾಬರಿಗೊಂಡು ಕಿಟಕಿ ಬಾಗಿಲು ತೆರೆದುನೋಡಿದಾಗ  ಸರೋಜಾ  ನೇಣು ಹಾಕಿಕೊಂಡಿದ್ದು ಕಂಡುಬಂತು.
 
ಈ ನಡುವೆ  ಸರೋಜಾ  ಕುಟುಂಬವು ಪೊಲೀಸರಿಗೆ ಕಿಶೋರ್ ಪತ್ನಿಯನ್ನು ಕೊಂದಿದ್ದಾನೆಂದು ದೂರು ನೀಡಿದ್ದಾರೆ. ಕಿಶೋರ್ ಮತ್ತು ಸರೋಜಾ ದೆಹಲಿಯಲ್ಲಿ ಕಾಲೇಜು ಸಹಪಾಠಿಗಳಾಗಿದ್ದು, 2008ರಲ್ಲಿ ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದರು. ಆದರೆ ನಂದೀಪ್ ವೈದ್ಯೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ದಾಂಪತ್ಯದಲ್ಲಿ ವಿರಸ ಮೂಡಿತ್ತು. ಕಿಶೋರ್  ವೈದ್ಯೆಯೊಂದಿಗೆ ಪ್ರಣಯದಲ್ಲಿದ್ದಾಗ ಸರೋಜಾ ತಂದೆಗೆ ಸಿಕ್ಕಿಬಿದ್ದಿದ್ದರು.
 
ಬಳಿಕ ಮಹಿಳೆ ಸರೋಜಾ ತಂದೆಗೆ ಕ್ಷಮಾಪಣೆ ಕೇಳಿದ್ದರೂ ಕಿಶೋರ್ ಅವಳೊಂದಿಗೆ ಸರಸ ಮುಂದುವರಿಸಿದ್ದ. ಕಿಶೋರ್ ಪ್ರೇಯಸಿ ಬರೆದ ಪತ್ರವನ್ನು ಸರೋಜಾ ನೋಡಿ ಕೋಪಗೊಂಡಳು. ಇಬ್ಬರ ನಡುವೆ ಮಾತಿನ ಚಕಮಕಿಯಲ್ಲಿ ನಂದೀಪ್ ಕುಮುದಾಳಿಗೆ ಥಳಿಸಿ ಮನೆಯಿಂದ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸತ್ಯ ಹರಿಶ್ಚಂದ್ರರ ತುಂಡುಗಳ ಬಣ್ಣವೆಲ್ಲಾ ಬಯಲಾಗ್ತಿದೆ: ಬಿ ಶ್ರೀರಾಮುಲು

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕೈ ಹೈಕಮಾಂಡ್‌ ಶಾಕ್‌: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರಿಗೂ ನಿರಾಸೆ

ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌: ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್‌ ಹೇಳಿದ್ದೇನು ಗೊತ್ತಾ

Mallikarjun Kharge: ಕಾಲ್ತುಳಿತ ಆಕಸ್ಮಿಕವಾಗಿ ನಡೆದಿದ್ದು ನಮ್ಮವ್ರು ಕ್ಷಮೇನೂ ಕೇಳವ್ರೆ: ಮಲ

Karnataka caste census: 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆ: ವಿ.ಸುನೀಲ್ ಕುಮಾರ್

ಮುಂದಿನ ಸುದ್ದಿ
Show comments