Webdunia - Bharat's app for daily news and videos

Install App

ಪತ್ನಿ ಪ್ರಿಯಕರನ ಹತ್ಯೆ ಮಾಡಿದ ಪತಿ

Webdunia
ಶುಕ್ರವಾರ, 26 ಮಾರ್ಚ್ 2021 (09:31 IST)
ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯ ಪ್ರಿಯಕರನನ್ನು ಪತಿಯೇ ಹತ್ಯೆ ಮಾಡಿದ ಘಟನೆ ಬ್ಯಾಡರಹಳ್ಳಿಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


26 ವರ್ಷದ ಶಿವಕುಮಾರ್ ಎಂಬಾತ ಹತ್ಯೆಗೀಡಾದಾತ. 31 ವರ್ಷದ ಭರತ್ ಆರೋಪಿ. ಈತನ ಪತ್ನಿ ವಿನುತಾ ಮತ್ತು ಶಿವಕುಮಾರ್ ಅಕ್ರಮ ಸಂಬಂಧ ಹೊಂದಿದ್ದರು. ಎಂಟು ವರ್ಷಗಳ ಹಿಂದೆ ಭರತ್-ವಿನುತಾ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳೂ ಇದ್ದಾರೆ.

ಹತ್ಯೆಗೀಡಾದ ಶಿವಕುಮಾರ್ ವಿನುತಾ ಊರಿನವನು. ಕೆಲಸ ಹುಡುಕಿಕೊಂಡು ಬಂದಿದ್ದ ಶಿವಕುಮಾರ್ ವಿನುತಾ ಮನೆಯಲ್ಲಿ ಉಳಿದುಕೊಂಡಿದ್ದ. ಈ ವೇಳೆ ಇವರಿಬ್ಬರೂ ಸಲುಗೆಯಿಂದ ಇದ್ದಿದ್ದಕ್ಕೆ ಭರತ್ ಜಗಳವಾಡಿದ್ದ. ಅದಾದ ಬಳಿಕ ಆತ ಮನೆಯಿಂದ ಹೊರಹೋಗಿದ್ದ.

ಇದೀಗ ಮತ್ತೆ ಶಿವಕುಮಾರ್ ವಿನುತಾಗೆ ಕರೆ ಮಾಡಿ ಮನೆಗೆ ಬರುವುದಾಗಿ ಹೇಳಿದ್ದ. ಆತ ಮನೆಗೆ ಬರುವ ವೇಳೆಗೆ ಹಬ್ಬದೂಟ ಮಾಡಳು ವಿನುತಾ ತಯಾರಾಗಿದ್ದಳು. ಇದನ್ನು ಗಮನಿಸಿದ ಭರತ್ ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದ. ರಾತ್ರಿ ಮನೆಗೆ ಬಂದ ಶಿವಕುಮಾರ್-ವಿನುತಾ ಜೊತೆಯಾಗಿ ಕಾಲ ಕಳೆದಿದ್ದಾರೆ. ಬೆಳಗಿನ ಜಾವ ವಿನುತಾ ಸ್ನಾನ ಗೃಹಕ್ಕೆ ಹೋಗಿದ್ದಾಗ ಮಂಚದ ಕೆಳಗಿನಿಂದ ಹೊರಬಂದ ಭರತ್ ಚಾಕುವಿನಿಂದ ಹಲವು ಬಾರಿ ಇರಿದು ಶಿವಕುಮಾರ್ ಹತ್ಯೆ ಮಾಡಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mallikarjun Kharge: ಮಾರಾಯಾ ನಿನ್ನ ಇಂಗ್ಲಿಷ್ ತಗೊಂಡು ನಾವೇನು ಮಾಡೋಣ ಮೋದಿ, ದೇಶಕ್ಕೆ ಭದ್ರತೆ ಕೊಡಿ: ಮಲ್ಲಿಕಾರ್ಜುನ ಖರ್ಗೆ

Karnataka Weather: ರಾಜ್ಯದಲ್ಲಿ ಇನ್ನು ನಾಲ್ಕು ದಿನಗಳಿಗೆ ಮಳೆ

Mangaluru Suhas Shetty: ಮಂಗಳೂರು ಸುಹಾಸ್ ಶೆಟ್ಟಿ ನಡುರಸ್ತೆಯಲ್ಲೇ ಹತ್ಯೆ ಮಾಡುವ ಭೀಕರ ವಿಡಿಯೋ ಇಲ್ಲಿದೆ ನೋಡಿ

Mangaluru Suhas Shetty murder: ಇಂದು ದಕ್ಷಿಣ ಕನ್ನಡ ಬಂದ್

Mangalore Suhas Shetty: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ: ಮತ್ತೆ ಕೋಮುಗಲಭೆಯ ಆತಂಕ

ಮುಂದಿನ ಸುದ್ದಿ
Show comments