Select Your Language

Notifications

webdunia
webdunia
webdunia
webdunia

ಬೆಂಗಳೂರಿಗೆ ಹೋಗಬೇಕೆಂದು ಹಠ ಹಿಡಿದ ಪತ್ನಿಯನ್ನು ಕೊಂದ ಭೂಪ

ಬೆಂಗಳೂರಿಗೆ ಹೋಗಬೇಕೆಂದು ಹಠ ಹಿಡಿದ ಪತ್ನಿಯನ್ನು ಕೊಂದ ಭೂಪ
ಬೆಂಗಳೂರು , ಮಂಗಳವಾರ, 13 ನವೆಂಬರ್ 2018 (09:48 IST)
ಬೆಂಗಳೂರು: ಊರಿನ ಸಹವಾಸ ಬೇಡ, ಬೆಂಗಳೂರಿಗೆ ಹೋಗಿ ಸೆಟ್ಲ್ ಆಗೋಣ ಎಂದು ಹಠ ಹಿಡಿಯುತ್ತಿದ್ದ ಪತ್ನಿಯ ಕತ್ತು ಹಿಸುಕಿ ಪತಿ ಕೊಲೆ ಮಾಡಿದ ಘಟನೆ ಕಡೂರು ತಾಲೂಕಿನಲ್ಲಿ ನಡೆದಿದೆ.

ಬೆಂಗಳೂರಿಗೆ ಹೋಗುವ ವಿಚಾರದಲ್ಲಿ ಪತಿ ಮಹೇಶ್ ನಾಯ್ಕ್ ಮತ್ತು ಪತ್ನಿ ಜಯೋತಿ ಬಾಯಿ ನಡುವೆ ವಾಗ್ವಾದ ನಡೆದಿದ್ದು, ಇದು ತಾರಕಕ್ಕೇರಿ ಪತಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇಬ್ಬರೂ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಆದರೆ ದೀಪಾವಳಿ ಹಬ್ಬಕ್ಕೆಂದು ಊರಿಗೆ ತೆರಳಿದ್ದ ದಂಪತಿ ಮರಳಿ ಬೆಂಗಳೂರಿಗೆ ಮರಳುವ ವಿಚಾರದಲ್ಲಿ ಮನಸ್ತಾಪ ಉಂಟಾಗಿದೆ. ಬೆಂಗಳೂರಿಗೆ ಹೋಗುವುದು ಬೇಡ ಎಂಬುದು ಪತಿಯ ನಿಲುವಾದರೆ, ಪತ್ನಿ ಊರು ಬೇಡ ಬೆಂಗಳೂರೇ ಬೇಕು ಎಂದು ಜಗಳವಾಡಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದು, ಅವರನ್ನು ಅಂಗಡಿಗೆ ಕಳುಹಿಸಿ ಈ ಕೃತ್ಯವೆಸಗಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಅಪರಿಚಿತನ ಮೃತದೇಹ ನೋಡಲು ಹೋದ ಪೊಲೀಸರಿಗೆ ಶಾಕ್ ಕಾದಿತ್ತು!