Webdunia - Bharat's app for daily news and videos

Install App

ರಸ್ತೆಗೆ ಬಂದ ನೂರಾರು ಜನರ ಬೈಕ್ ವಶ

Webdunia
ಭಾನುವಾರ, 19 ಜುಲೈ 2020 (14:22 IST)
ಕೊರೊನಾ ಸೋಂಕು  ದಿನೇ ದಿನೇ ಹೆಚ್ಚುತ್ತಿರುವುದನ್ನು  ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಸಂಡೇ ಲಾಕ್ ಡೌನ್‍ ಉಲ್ಲಂಘನೆ ಮಾಡಿಸದವರ ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ  ಜನರು ಬೆಂಬಲ ನೀಡಿ ಬಹುತೇಕರು ಮನೆಯಲ್ಲೇ ಉಳಿದಿದ್ದರೆ, ವಿನಾಕಾರಣ ಹೊರಗೆ ಬಂದಿದ್ದವರ ವಾಹನಗಳನ್ನು ಪೊಲೀಸರು ಮುಲಾಜಿಲ್ಲದೆ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಮದ್ಯಾಹ್ನದವರೆಗೆ 150 ಕ್ಕೂ ಹೆಚ್ಚು ಬೈಕ್ ಗಳನ್ನು ವಶಪಡಿಕೊಳ್ಳಲಾಗಿತ್ತು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿದೆ. ವಾಣಿಜ್ಯ  ವಹಿವಾಟಿನ ಎಲ್ಲಾ ಮಳಿಗೆಗಳು  ಸಂಪೂರ್ಣ ಬಂದ್ ಮಾಡಿದೆ.

ಬಳ್ಳಾರಿ ನಗರದ ಬಹುತೇಕ ಪ್ರಮುಖ ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್‍ಗಳನ್ನು ಇರಿಸಿ, ಪಟ್ಟಿ ಕಟ್ಟಿ ಬಂದ್ ಮಾಡಿದ್ದರು. ಆದರೂ ವಿನಾಕಾರಣ ಬೈಕ್ ಗಳನ್ನು ತೆಗೆದುಕೊಂಡು ಬಂದವರನ್ನು ಗಡಗಿ ಚನ್ನಪ್ಪ ವೃತ್ತ,  ಗಾಂಧಿ ನಗರ ಠಾಣೆ ಬಳಿ ತಡೆದು ವಶಪಡಿಸಿಕೊಂಡ ವಾಹನಗಳನ್ನು ಸೆಂಟನರಿ ಹಾಲ್‍ನಲ್ಲಿ ಇರಿಸಲಾಯಿತು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments