Webdunia - Bharat's app for daily news and videos

Install App

ಮಾನವೀಯತೆ ಮೆರೆದ ಪತ್ರಕರ್ತರು

Webdunia
ಮಂಗಳವಾರ, 10 ಜುಲೈ 2018 (18:01 IST)
ಧಾರಾಕಾರ ಮಳೆಯ ಅವಘಡದಿಂದ ಮೂಕ ಪ್ರಾಣಿಯ ಮನಕಲುಕುವ ಘಟನೆ ನಡೆದಿದೆ. ಚರಂಡಿಯಲ್ಲಿ ಕೊಚ್ಚಿ ಹೋಗಿ ಸಾವನ್ನಪಿದ್ದ ನಾಯಿ ಮರಿಗಳಿಗೆ ಅಂತ್ಯ ಸಂಸ್ಕಾರ ಮಾಡಿದ ಪತ್ರಕರ್ತರು ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಸುಭಾಷನಗರದಲ್ಲಿ ಕಂಡು ಬಂದಿದ್ದು. ಇನ್ನೂ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದ, ಮರಿ ನಾಯಿಗಳು ಚರಂಡಿಯಲ್ಲಿ ಕೊಚ್ಚಿಹೋಗಿ ತಾಯಿ ನಾಯಿ ರೋಧಿಸುತ್ತಿದ್ದ ಪ್ರಸಂಗ ನಡೆದಿದೆ.

ಈ ವೇಳೆ ನಾಯಿಯ ರೋಧನವನ್ನು ಆಲಿಸಿದ ಪತ್ರಕರ್ತರು ಹಾಗೂ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಒಂದು ನಾಯಿ ಮರಿಯನ್ನೆಷ್ಟೆ ರಕ್ಷಿಸಲು ಸಾದ್ಯವಾಯಿತು. ಅಲ್ಲದೆ ಇನ್ನೂಳಿದ ಮೂರು ನಾಯಿ ಮರಿಗಳು ಚರಂಡಿಯಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿತ್ತು.   ಮಳೆಯಲ್ಲಿಯೇ ಮೂರು ನಾಯಿ ಮರಿಗಳನ್ನ ಸುರಿಯುತ್ತಿರುವ ಮಳೆಯಲ್ಲಿಯೇ ಅಂತ್ಯಸಂಸ್ಕಾರ ಮಾಡಿ , ಬದುಕುಳಿದ ನಾಯಿ ಮರಿ ಹಾಗೂ ತಾಯಿ ನಾಯಿಗೆ ಆಹಾರವನ್ನು ನೀಡಿ ಪತ್ರಕರ್ತರು ಹಾಗೂ ತೋಟಗಾರಿಕೆ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments