Webdunia - Bharat's app for daily news and videos

Install App

ಮದ್ಯ ಸರಬರಾಜಿನಲ್ಲಿ ಭಾರಿ ವ್ಯತ್ಯಯ

Webdunia
ಬುಧವಾರ, 6 ಏಪ್ರಿಲ್ 2022 (18:37 IST)
ತನ್ನ ಅಪ್ರಾಪ್ತ ಮಗಳ ಮೇಲೆ ಪದೇಪದೆ ಅತ್ಯಾಚಾರ (Rape) ನಡೆಸಿದ ತಂದೆಗೆ ವಿಶೇಷ ನ್ಯಾಯಾಲಯವು 25 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಮೊಮ್ಮಗಳಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ ಹುಡುಗಿಯ ಅಜ್ಜಿಯನ್ನು ಶ್ಲಾಘಿಸಿದೆ. ವಿಶೇಷ ನ್ಯಾಯಾಧೀಶರಾದ ಭಾರ್ತಿ ಕಾಳೆ ಕಳೆದ ವಾರ ಆರೋಪಿಗಳು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆತ ಮಾಡಿದ ಅಪರಾಧಕ್ಕೆ ಆತನನ್ನು ತಪ್ಪಿತಸ್ಥನೆಂದು ಘೋಷಿಸಿದ್ದರು. ಆ ತೀರ್ಪಿನ ವಿವರವಾದ ಆದೇಶ ಇಂದು ಲಭ್ಯವಾಯಿತು. ಸಂತ್ರಸ್ತೆ ತನ್ನ ಅಜ್ಜಿ, ತಂದೆ, ಚಿಕ್ಕಪ್ಪ ಮತ್ತು ಇಬ್ಬರು ಒಡಹುಟ್ಟಿದವರ ಜೊತೆ ವಾಸಿಸುತ್ತಿದ್ದಳು. ಕೌಟುಂಬಿಕ ಕಲಹದ ಕಾರಣದಿಂದ 7 ವರ್ಷಗಳ ಹಿಂದೆ ಆಕೆಯ ತಾಯಿ ತನ್ನ ತಂದೆಯನ್ನು ತೊರೆದಿದ್ದಳು.
 
ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆಯ ವಿಷಯ ತಿಳಿದ ಸಂತ್ರಸ್ತೆಯ ಅಜ್ಜಿ ದೂರು ದಾಖಲಿಸಿದ್ದಾರೆ. ಅಂತಹ ವೃದ್ಧಾಪ್ಯದಲ್ಲಿಯೂ ಮೊಮ್ಮಗಳ ಪರವಾಗಿ ನ್ಯಾಯವನ್ನು ಕೋರಿದ್ದಕ್ಕಾಗಿ ಸಂತ್ರಸ್ತೆಯ ಅಜ್ಜಿಯನ್ನು ಪ್ರಶಂಸಿಸಬೇಕಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.ತಂದೆಯು ಭದ್ರತೆ, ನಂಬಿಕೆ ಮತ್ತು ಪ್ರೀತಿಯ ಅಡಿಪಾಯವನ್ನು ಹಾಕುತ್ತಾನೆ. ತನ್ನ ಮಕ್ಕಳಿಗಾಗಿ ಏನೇನೋ ತ್ಯಾಗ ಮಾಡುತ್ತಾನೆ. ತನ್ನ ಮಗಳ ಜೀವವನ್ನು ಸುರಕ್ಷಿತವಾಗಿಸುತ್ತಾನೆ ಮತ್ತು ಅವಳನ್ನು ನೋಯಿಸದಂತೆ ರಕ್ಷಿಸುತ್ತಾನೆ. ಆದರೆ, ಈ ಪ್ರಕರಣದಲ್ಲಿ ಸಂತ್ರಸ್ತೆಯ ತಂದೆಯೇ ಅವಳಿಗೆ ಅಪಾರ ನೋವನ್ನುಂಟುಮಾಡಿದ್ದಾರೆ. ಬಾಲ್ಯದ ಆಘಾತವು ಬಾಲಕಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯವು ಆತಂಕ ಹೊಂದಿದೆ ಎಂದು ಕೋರ್ಟ್​ ಹೇಳಿದೆ.
 
ಆ ವ್ಯಕ್ತಿ ತನ್ನ ಮಗಳನ್ನು ಹುಡುಗರೊಂದಿಗೆ ಆಟವಾಡಲು ಬಿಟ್ಟಿರಲಿಲ್ಲ. ಆಕೆ ಹುಡುಗರೊಂದಿಗೆ ಮಾತನಾಡದಂತೆ ತಡೆದಿದ್ದ ಎಂದು ಆರೋಪಿಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹೀಗಾಗಿ, ಆ ಬಾಲಕಿ ಹಾಗೂ ಆಕೆಯ ತಂದೆಯ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಆರೋಪಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಇದಲ್ಲದೆ, ಸಣ್ಣ ಕೊಠಡಿಯಲ್ಲಿ ಸುಮಾರು 7ರಿಂದ 8 ವ್ಯಕ್ತಿಗಳು ತಂಗಿದ್ದ ಕಾರಣ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಹೆಚ್ಚು ಅಸಂಭವವಾಗಿದೆ ಎಂದು ಅವರು ವಾದಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕದ ಮರ್ಯಾದೆ ಹಾಳು ಮಾಡಿದ್ದೀರಿ: ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಸೋಮಣ್ಣ ವಾಗ್ದಾಳಿ

ಹನಿಮೂನ್​ಗೆ ಹೋದ ನವಜೋಡಿ ನಾಪತ್ತೆ: ಕಮರಿನಲ್ಲಿ ಗಂಡನ ಶವ ಪತ್ತೆ, ಪತ್ನಿಗಾಗಿ ಮುಂದುವರಿದ ಹುಡುಕಾಟ

ಅರಾಂಬೈ ಬಂಧನ ಬೆನ್ನಲ್ಲೆ ಮಣಿಪುರದಲ್ಲಿ ಹಿಂಸಾಚಾರ: ಹಲವೆಡೆ ಕರ್ಫ್ಯೂ ಜಾರಿ, ಇಂಟರ್ನೆಟ್ ಸ್ಥಗಿತ

Karnataka weather: ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬಿ.ಎಸ್‌.ಯಡಿಯೂರಪ್ಪ ಮೊಮ್ಮಗನ ಆರತಕ್ಷತೆಗೆ ಗಣ್ಯರ ದಂಡು: ಉಪರಾಷ್ಟ್ರಪತಿ, ರಾಜ್ಯಪಾಲ ಸಿ.ಎಂರಿಂದ ಶುಭಹಾರೈಕೆ

ಮುಂದಿನ ಸುದ್ದಿ