Select Your Language

Notifications

webdunia
webdunia
webdunia
webdunia

ಮಂಗಳೂರು ದಸರಾ ಕೆಎಸ್‌ಆರ್‌ಟಿಸಿ ವಿಶೇಷ ಪ್ಯಾಕೇಜ್‌ ಟೂರ್‌ಗೆ ಭರ್ಜರಿ ರೆಸ್ಪಾನ್ಸ್‌, ಪ್ರವಾಸಿಗರಿಗೆ ಇಲ್ಲಿದೆ ಗುಡ್‌ನ್ಯೂಸ್‌

KSRTC ಮಂಗಳೂರು

Sampriya

ಮಂಗಳೂರು , ಮಂಗಳವಾರ, 30 ಸೆಪ್ಟಂಬರ್ 2025 (19:58 IST)
Photo Credit X
ಮಂಗಳೂರು:  ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಆರಂಭವಾದ ದಸರಾ ವಿಶೇಷ ಟೂರ್‌ ಪ್ಯಾಕೇಜ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ  ಅಕ್ಟೋಬರ್ 7 ರವರೆಗೆ ಸೇವೆಯನ್ನು ವಿಸ್ತರಿಸಲು ನಿಗಮವು ಸೂಚಿಸಿದೆ.

ಆರಂಭದಲ್ಲಿ ಅಕ್ಟೋಬರ್ 2 ರವರೆಗೆ ಈ ವಿಶೇಷ ಟೂರ್ ಪ್ಯಾಕೇಜ್ ನಿಗಧಿಯಾಗಿತ್ತು.

ಮಂಗಳೂರು-ಮಡಿಕೇರಿ, ಮಂಗಳೂರು-ಸಿಗಂದೂರು ಮತ್ತು ಮಂಗಳೂರು-ಕೊಲ್ಲೂರು ಮಾರ್ಗಗಳಲ್ಲಿ ವಿಶೇಷ ಪ್ಯಾಕೇಜ್ ಪ್ರವಾಸಗಳು ಈಗ ಹೆಚ್ಚುವರಿ ಐದು ದಿನಗಳವರೆಗೆ ಮುಂದುವರಿಯುತ್ತವೆ.

ಸೆಪ್ಟೆಂಬರ್ 22 ಮತ್ತು 29 ರ ನಡುವೆ, ಸಿಗಂದೂರು, ಕೊಲ್ಲೂರು, ಕಟೀಲು, ಮಡಿಕೇರಿ, ಉಡುಪಿ-ಕೊಲ್ಲೂರು, ಮತ್ತು ಉಡುಪಿ-ಶೃಂಗೇರಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಒಟ್ಟು 4,533 ಪ್ರಯಾಣಿಕರು ಮತ್ತು ಪ್ರವಾಸಿಗರು ಪ್ಯಾಕೇಜ್ ಸೇವೆಗಳನ್ನು ಪಡೆದುಕೊಂಡಿದ್ದಾರೆ.

ಹಬ್ಬದ ಋತುವಿನಲ್ಲಿ ಪ್ರಮುಖ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಉತ್ಸುಕರಾಗಿರುವ ಭಕ್ತರು ಮತ್ತು ಪ್ರವಾಸಿಗರಿಗೆ ವಿಸ್ತರಣೆಯು ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸಂಪುಟ ವಿಸ್ತರಣೆ: ಶಾಕಿಂಗ್ ಹೇಳಿಕೆ ಕೊಟ್ಟ ಗೃಹ ಸಚಿವ ಪರಮೇಶ್ವರ್