Select Your Language

Notifications

webdunia
webdunia
webdunia
webdunia

ಹ್ಯೂಬ್ಲೆಟ್ ವಾಚ್ ಪ್ರಕರಣ: ಗಿಫ್ಟ್ ಅಂದ್ರೆ ಹೆದರಿ ಕಂಗಾಲಾಗುವ ಸಿಎಂ ಸಿದ್ದರಾಮಯ್ಯ

ಹ್ಯೂಬ್ಲೆಟ್ ವಾಚ್ ಪ್ರಕರಣ: ಗಿಫ್ಟ್ ಅಂದ್ರೆ ಹೆದರಿ ಕಂಗಾಲಾಗುವ ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಮಂಗಳವಾರ, 18 ಅಕ್ಟೋಬರ್ 2016 (14:01 IST)
ಹ್ಯೂಬ್ಲೆಟ್ ವಾಚ್ ಗಿಫ್ಟ್ ಪ್ರಕರಣದಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಶುಸಂಗೋಪನಾ ಖಾತೆ ಸಚಿವ ಎ.ಮಂಜು ನೀಡಿದ ಗಿಫ್ಟ್‌ನ್ನು ನಿರಾಕರಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಶುಸಂಗೋಪನಾ ಖಾತೆ ಸಚಿವ ಎ.ಮಂಜು ಮುಚ್ಚಿದ ಕವರ್‌ನಲ್ಲಿ ಗಿಫ್ಟ್‌ ನೀಡಲು ಮುಂದಾಗಿದ್ದರು. 
 
ತಕ್ಷಣವೇ ಕವರ್‌ನಲ್ಲಿ ಏನಿದೆ ಎಂದು ಸಿಎಂ ಪ್ರಶ್ನಿಸಿದರು. ಮುಚ್ಚಿದ ಕವರ್‌ನಲ್ಲಿ ರೇಷ್ಮೆ ಜುಬ್ಬಾ ಇರುವುದಾಗಿ ಸಚಿವರು ತಿಳಿಸಿದಾಗ, ನಾನು ಜುಬ್ಬಾ ಬಳಸಲ್ಲ, ನನಗೆ ಇದು ಬೇಡ ಎಂದು ಗಿಫ್ಟ್ ಪಡೆಯಲು ಸಿದ್ದರಾಮಯ್ಯ ನಿರಾಕರಿಸಿದ ಘಟನೆ ನಡೆಯಿತು. 
 
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಲಕ್ಷಾಂತರ ರೂಪಾಯಿ ಮೌಲ್ಯದ ಹ್ಯೂಬ್ಲೆಟ್ ವಾಚ್ ಗಿಫ್ಟ್ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಗಿಫ್ಟ್ ಪಡೆಯಲು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ ಹಿರಿಯ 38 ವರ್ಷದ ಪಾಂಡಾ ಸಾವು