ಸೈಬರ್ ವಂಚಕರಿಂದ ಸುಧಾಮೂರ್ತಿ ಬಚಾವ್ ಆಗಿದ್ದು ಹೇಗೆ, ಇದು ನಿಮಗೂ ಪಾಠವಾಗುತ್ತೆ

Krishnaveni K
ಮಂಗಳವಾರ, 23 ಸೆಪ್ಟಂಬರ್ 2025 (08:57 IST)
ಬೆಂಗಳೂರು: ರಾಜ್ಯಸಭಾ ಸದಸ್ಯೆ, ಇನ್ ಫೋಸಿಸ್ ಸಹ ಸಂಸ್ಥಾಪಕಿ ಸುಧಾಮೂರ್ತಿಯವರನ್ನೂ ಸೈಬರ್ ವಂಚಕರು ವಂಚಿಸಲು ಪ್ರಯತ್ನಿಸಿದ್ದರು. ಆದರೆ ಅವರು ಬಚಾವ್ ಆಗಿದ್ದು ಹೇಗೆ? ಇದು ನಿಮಗೂ ಪಾಠವಾಗುತ್ತದೆ.

ಸಂಸದ ಡಾ ಕೆ ಸುಧಾಕರ್ ಪತ್ನಿಗೆ ಸೈಬರ್ ವಂಚಕರು 14 ಲಕ್ಷ ರೂ. ವಂಚಿಸಿದ ಘಟನೆ ಈಗ ಭಾರೀ ಸುದ್ದಿಯಾಗಿದೆ. ಸಾಮಾನ್ಯರಿಂದ ಹಿಡಿದು ಈ ರೀತಿ ವಿಐಪಿಗಳೂ ಸೈಬರ್ ವಂಚಕರ ಬಲೆಗೆ ಬೀಳುತ್ತಿರುವುದು ಶಾಕಿಂಗ್ ಆಗಿದೆ.

ಈ ನಡುವೆ ಸುಧಾಮೂರ್ತಿಯವರನ್ನೂ ಸೈಬರ್ ವಂಚಕರು ವಂಚಿಸಲು ಪ್ರಯತ್ನಿಸಿದ್ದರು. ನಿಮ್ಮ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಲಾಗಿಲ್ಲ, ಅಶ್ಲೀಲ ಮೆಸೇಜ್ ಕಳುಹಿಸಲಾಗುತ್ತಿದೆ. ಹೀಗಾಗಿ ವೈಯಕ್ತಿಕ ಮಾಹಿತಿ ನೀಡಿ ಎಂದು ಒಬ್ಬಾತ ಕರೆ ಮಾಡಿದ್ದ.

ಆದರೆ ಎಚ್ಚೆತ್ತುಕೊಂಡ ಅವರು ಆ ನಂಬರ್ ನ್ನು ಟ್ರೂ ಕಾಲರ್ ನಲ್ಲಿ ಪರಿಶೀಲಿಸಿದ್ದರು. ಆಗ ಟೆಲಿಕಾಂ ಡಿಪಾರ್ಟ್ ಮೆಂಟ್ ಎಂದು ಕಂಡುಬಂದಿತ್ತು. ಹೀಗಾಗಿ ಎಚ್ಚೆತ್ತುಕೊಂಡ ಅವರು ತಕ್ಷಣವೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದೇ ರೀತಿ ಪೊಲೀಸ್, ಸಿಐಡಿ, ಸಿಬಿಐ ಇಲಾಖೆ ಅಧಿಕಾರಿಗಳು ಎಂದೆಲ್ಲಾ ಹೇಳಿಕೊಂಡು ವಂಚಕರು ಕರೆ ಮಾಡುತ್ತಾರೆ. ಇಂತಹ ಕರೆ ಬಂದ ತಕ್ಷಣ ಅದನ್ನು ಕುರುಡಾಗಿ ನಂಬುವ ಬದಲು ನಂಬರ್ ಯಾರದ್ದು ಎಂದು ಪತ್ತೆ ಹಚ್ಚಲು ಪ್ರಯತ್ನಿಸಿ. ಅನುಮಾನ ಬಂದರೆ ತಕ್ಷಣವೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ. ಯಾಕೆಂದರೆ ಯಾರೂ ಈ ರೀತಿ ಫೋನ್ ಕರೆ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿ ಕೇಳಲ್ಲ. ಇದು ವಂಚಕರದ್ದೇ ಜಾಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ನವಂಬರ್ 18 ಕ್ಕೆ ಪ್ರಮಾಣವಚನ ಮಾಡ್ತೀನಿ ಎಂದಿದ್ದ ತೇಜಸ್ವಿ ಯಾದವ್ ಗೆ ಸೋಲಾಗಲು ತಂದೆಯೇ ಕಾರಣನಾ

Bihar Election result 2025: ಬಿಹಾರದ ಇಂದಿನ ಫಲಿತಾಂಶವನ್ನು ಮೊದಲೇ ಭವಿಷ್ಯ ನುಡಿದಿದ್ದ ಅಮಿತ್ ಶಾ video

ವೃಕ್ಷ ಮಾತೆ, ಶತಾಯುಷಿ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ

ಮುಂದಿನ ಸುದ್ದಿ
Show comments